ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಪತ್ರ ಬರೆದ ಕಳಸ ಅತಿಥಿ ಉಪನ್ಯಾಸಕರು

ಕಳಸ :ದಯಾಮರಣಕ್ಕೆ ಅವಕಾಶ ಕೊಡಿ ಇಲ್ಲವೇ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ಕೊಡಿ ಎಂದು ಕಳಸ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿ ರಾಜ್ಯಪಾಲರು ಶಿಕ್ಷಣ ಸಚಿವರಿಗೆ ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ ರಾಜ್ಯದಲ್ಲಿ 14500 ಅತಿಥಿ ಉಪನ್ಯಾಸಕರು ಇದ್ದಾರೆ ಈಗಿನ ಸರ್ಕಾರದ ಆದೇಶದನ್ವಯ ಸಾವಿರಾರು ಉಪನ್ಯಾಸಕರು ಸೇವೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಸೇವಾ ಭದ್ರತೆ ಅಥವಾ ಸೇವಾ ವಿಲೀನತೆ ಕೋರಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೇವೆ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆಯುವ ಆದೇಶ ಹೊರಡಿಸಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು ಅತಿಥಿ ಉಪನ್ಯಾಸಕರಾದ ಪ್ರಸಾದ್. ಸಚಿನ್. ಕುಮಾರ್. ಸುಭಾಷ್. ವೈಶಿರಿ. ಪಕೀರಪ್ಪ.ಇದ್ದರು