ಕಾಫಿ ಬೆಳೆಗಾರರ ಹಿತ ಕಾಪಾಡಲು ಬೆಳೆಗಾರರ ಸಂಘ ಬದ್ದ

ಮೂಡಿಗೆರೆ: ತಾಲೂಕಿನ ಬೆಳೆಗಾರರ ಹಿತ ಕಾಪಾಡಲು ಬೆಳೆಗಾರರ ಸಂಘ ಬದ್ದ
ಅತಿವೃಷ್ಟಿ, ಅನಾವ್ರಷ್ಟಿಗಳಲ್ಲಿ ಬೆಳೆ ಪರಿಹಾರ ಎಲ್ಲರಿಗೂ ದೊರಕಲು ಬೆಳೆಗಾರರ ಸಂಘ ಹೋರಾಟ ಮಾಡಿದ್ದು ಎಲ್ಲಾರಿಗೂ ಶೀಘ್ರದಲ್ಲೇ ಪರಿಹಾರ ದೊರಕಲಿದೆ ಎಂದು ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹೇಳಿದರು ಜಾವಳಿಯಲ್ಲಿ ಕಾಫಿ ಮಂಡಳಿ ವತಿಯಿಂದ ಇಂದು ನಡೆದ ಮಣ್ಣು ಪರೀಕ್ಷಾ ಸಮಾರಂಭದಲ್ಲಿ ಮಾತನಾಡಿದರು,
ಶಿವಪ್ರಸಾದ್ ಬಾಳೆಹೊನ್ನೂರು ಕಾಫಿ ಸಂಶೋಧನ ಕೇಂದ್ರದ ರಾಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥರು ಇವರು ಮಾತನಾಡಿ ಉತ್ತಮವಾದ ಕಾಫಿ ಫಸಲು ಪಡೆಯಲು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು, ಈ ಭಾಗದಲ್ಲಿ ಮಳೆ ಅತಿಯಾಗಿ ಸುರಿಯುವುದರಿಂದ ಸುಣ್ಣದ ಅಂಶ ತೊಳೆದು ಹೋಗುತ್ತದೆ ಮೂರು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ ವ್ಯವಸಾಯದ ಸುಣ್ಣ ಹಾಕಬೇಕು ಎಂದರು.
ಚಂದ್ರಶೇಖರ್ ಸಂಶೋಧನೆ ಸಹಾಯಕರು,
S.d ಜೋಷಿ ಕಾಫಿ ಬೋರ್ಡ್ ಸಂಪರ್ಕದಿಕಾರಿಗಳು ಕಳಸ,ಕಾಫಿ ಬೆಳೆಗಾರರರಾದ ಎಂ.ವಿ ಜಗದೀಶ್ ಗೌಡ,ಶಶಿಧರ್, ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್, ಪ್ರತೀಶ್ ,ಸುರೇಶ್ ಗೌಡ ,ಪರೀಕ್ಷಿತ್ ಜಾವಳಿ, ಸುದೀರ್ ಮೇಗೂರು,ಸಂಜೀವ್ ಕೋಟ್ಯಾನ್, ಅವೀನ್ ದೀಪ್ ರೊಡ್ರಿಗಸ್,ಗಿಲ್ಬರ್ಟ್ ಲೋಭೋ,ಕೇಶವೇಗೌಡ, ರವಿ ,ರಾಜು ಮಲೆಮನೆ,ಚಿದಂಬರ, ಯಮುನಮ್ಮ ಇದ್ದರು, ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಮಣ್ಣನ್ನು ಪರೀಕ್ಷಿಸಿ ಕೂಡಲೇ ವರದಿಯನ್ನು ಕೊಡಲಾಯಿತು