ಬಣಕಲ್ :ಬಣಕಲ್ ಹೋಬಳಿ ಕ.ಸಾ.ಪ. ನೂತನ ಅಧ್ಯಕ್ಷರಾಗಿ ತರುವೆ ಆದರ್ಶ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕ, ಸಾ, ಪ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಶಾಂತ ಕುಮಾರ್ ಮಾತನಾಡಿ ಹೋಬಳಿಯಾದ್ಯಂತ ಸಾಹಿತ್ಯದ ರಥ ಎಳೆಯಲು ನೂತನ ಅಧ್ಯಕ್ಷರನ್ನಾಗಿ ಆದರ್ಶ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು. ಹಾಗೂ ಇದೆ ಸಂದರ್ಭದಲ್ಲಿ
ಹಿರಿಯ ಸಾಹಿತಿ ಚಂಪಾರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮನ್ನು ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತರುವೆ ಆದರ್ಶ್ ರವರು ಮಾತನಾಡಿ
ಕನ್ನಡದ ಕಂಪು ಮನೆ ಮನಗಳಿಗೆ ಪಸರಿಸಬೇಕು. ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಹಾಗು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಎಲ್ಲ ಪ್ರಯತ್ನಗಳನ್ನು ಮಾಡಲು ಎಲ್ಲರ ಸಹಕಾರ ಬೇಕೆಂದು ಹೇಳಿದರು.
ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಹಳೆಕೋಟೆ ರಮೇಶ್. ಬಿದರಹಳ್ಳಿ ಜಯರಾಮ್ ಗೌಡ. ನಿಕಟಪೂರ್ವ ತಾಲ್ಲೂಕು ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್. ಹೊರಟ್ಟಿ ರಘು. ಕುಂದೂರು ಲಕ್ಷ್ಮಣ್ ಗೌಡ. ತಮ್ಮಯ್ಯ ಮೇಷ್ಟ್ರು. ಶಾಂತಕುಮಾರ್ ಮೇಸ್ಟ್ರು. ಮತ್ತು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷರು. ಪದಾಧಿಕಾರಿಗಳು ಹಾಗೂ ಹಲವಾರು ಸಾಹಿತ್ಯಭಿಮಾನಿಗಳು ಭಾಗವಹಿಸಿದ್ದರು.
