ಮೂಡಿಗೆರೆ :ಮೂಡಿಗೆರೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಇಂದು ಸನ್ಮಾನಿಸಲಾಯಿತು ಬಣಕಲ್ ವಿಮುಕ್ತಿ ಸ್ವಸಹಾಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಣಕಲ್ ನ ಉತ್ತಮ ರೈತ ಮಹಿಳೆ ಪ್ರಶಸ್ತಿಪಡೆದ ವನಶ್ರೀ ಗೌಡ. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಿ. ವಾಸುದೇವ್. ಬಣಕಲ್ ನಲ್ಲಿ 30ವರ್ಷಗಳ ವೈದ್ಯಕೀಯ ಸೇವೆಯನ್ನು ಗುರುತಿಸಿ ಪರಿಗಣಿಸಿ ಡಾ. ಪಡೂರ್ ರವರನ್ನು ಸನ್ಮಾನಿಸಲಾಯಿತು.
