ಬಣಕಲ್: ಸ್ವತ್ಛತೆಯ ಪರಿಕಲ್ಪನೆ ಇನ್ನೂ ಬಹಳಷ್ಟು ಗ್ರಾಮಗಳಲ್ಲಿ ಮೂಡಬೇಕಿದೆ. ಯುವ ಸಮುದಾಯ ಮನಸ್ಸು ಮಾಡಿದರೆ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರವೇ ಬದಲಾಗಬಹುದು. ಇದಕ್ಕೆ ಉದಾಹರಣೆ ಬಣಕಲ್ ಕ್ರೈಸ್ತ ಧರ್ಮಕೇಂದ್ರದ ಯುವಕರ ಗುಂಪೇ ಸಾಕ್ಷಿ.
ಕಳೆದ ಮತ್ತು ಪ್ರಸ್ತುತ ವರ್ಷ ಕೋವಿಡ್ ಸಂಧಿಘ್ನ ಪರಿಸ್ಥಿತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಬಣಕಲ್ ಕ್ರೈಸ್ತ ಬಾಂದವರು ಸಮಾಜ ಸೇವೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಜನಮನ ಗೆದ್ದಿರುವ ಬಣಕಲ್ ಕ್ರೈಸ್ತ ಬಾಂದವರು ಇಂದು ಬಣಕಲ್ ಪ್ರಾಥಮಿಕ ಅರೋಗ್ಯ ಕೇಂದ್ರದ
ಹೊರಂಗಾಣ ಆವರಣದಲ್ಲಿ ಬೆಳೆದಿದ್ದಂತ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಧರ್ಮ ಕೇಂದ್ರದ ಗುರುಗಳಾದ ಫಾದರ್ ಆಲ್ಬರ್ಟ್ ಡಿಸಿಲ್ವಾ, ಹಾಗೂ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮೇಲ್ವಿನ್ ಲಸ್ರದೋ.ಮಹಿಳೆಯರು,
ಹಿರಿಯ ನಾಗರೀಕರು, ಯುವಕರು, ಮಕ್ಕಳು, ಯುವತಿಯರು,ಭಾಗವಹಿಸಿ ಶ್ರಮದಾನ ಮಾಡಿದರು.
