ಚಿಕ್ಕಮಗಳೂರು: ರಾಜ್ಯದ ಬಿಜೆಪಿ ಸರಕಾರದಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಬಳಿಕ ಮುಂದಿನ ಸಿಎಂ ಯಾರೆಂಬ ರಾಜ್ಯದ ಜನರ ಕುತೂಹಲಕ್ಕೆ ತೆರಬಿದ್ದಿದ್ದು, ಬಸವರಾಜ ಬೊಮ್ಮಾಯಿ ಅವರನ್ನೇ ಸಿಎಂ ಎಂದು ಘೋಷಿಸಿ ಹೈಕಮಾಂಡ್ ಎಲ್ಲ ರೀತಿಯ ಗೊಂದಲಗಳಿಗೆ ತೆರೆ ಎಳೆದಿದೆ. ಈ ಮಧ್ಯೆ ಸಿಎಂ ರೇಸ್ನಲ್ಲಿದ್ದ ಜಿಲ್ಲೆಯ ನಾಲ್ಕು ಬಾರಿಯ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮುಖ್ಯಮಂತ್ರಿ ಗದ್ದುಗೆಗೇರುವ ಕನಸೂ ಭಗ್ನಗೊಂಡಿರುವುದರಿಂದ ಸದ್ಯ ಜಿಲ್ಲೆಯ ಜನರ ಏಕೈಕ ನಿರೀಕ್ಷೆ ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ಎಂಬುದಾಗಿದೆ.
ಯಡಿಯೂರಪ್ಪ ಬಳಿಕ ಸಿಎಂ ಯಾರೆಂಬುದು ಇಡೀ ರಾಜ್ಯದ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಸಿಎಂ ರೇಸ್ನಲ್ಲಿ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರ ಹೆಸರುಗಳೊಂದಿಗೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿ, ಹಾಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದ ಮುಖಂಡರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಸಿ.ಟಿ.ರವಿ ಅವರ ಹೆಸರೂ ಚಲಾವಣೆಯಲ್ಲಿತ್ತು ಸಿಟಿ ರವಿ ಕೂಡ ಈ ನಿಟ್ಟಿನಲ್ಲಿ ಬಿಡುವಿಲ್ಲದ ಹೋರಾಟ ನಡೆಸಿದ್ದರು ಆದರೆ ಬಿಜೆಪಿ ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ನೀಡಿರುವುದರಿಂದ ಸಿಟಿ ರವಿ ಅವರ ಹಿಂಬಾಲಕರ ಆಸೆಗೆ ತಣ್ಣೀರೆರಚಿದೆ ಈ ಬೆಳವಣಿಗೆಗಳ ಮಧ್ಯೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ ಅವರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಗೋವಾ ಸಚಿವದಂತಹ ಉನ್ನತಮಟ್ಟದ ಸ್ಥಾನಮಾನ ಸಿಗಲಿದೆ ಎಂಬ ಮಾತು ಕೇಳಿ ಬರುತ್ತಿದೆ ಆದರೆ ಸಿಟಿ ರವಿ ಅವರಿಗೆ ಈಗಾಗಲೇ ಸಚಿವ ಸ್ಥಾನದಂತಹ ಉನ್ನತ ಮಟ್ಟದ ಸ್ಥಾನಮಾನಗಳು ಸಿಕ್ಕಿದ್ದು ಜಿಲ್ಲೆಯಲ್ಲಿರುವ ಇತರೆ ಶಾಸಕರು ಎರಡು-ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ಇದುವರೆಗೂ ಸಚಿವ ಸ್ಥಾನಮಾನ ಸಿಕ್ಕಿಲ್ಲ
ತರೀಕೆರೆ ಶಾಸಕ ಡಿ ಎಸ್ ಸುರೇಶ್ ಹಾಗೂ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ತಲಾ ಮೂರು ಬಾರಿ ಶಾಸಕರಾಗಿದ್ದು ಈ ಶಾಸಕರು ಸಚಿವ ಸ್ಥಾನ ಬೇಕೆಂದು ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದಾರೆ ಈ ಬಾರಿಯಾದರೂ ಈ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕಾಗಿರುವುದು ಔಚಿತ್ಯ ಪೂರ್ಣ ಮಾತು ಕೇಳಿಬರುತ್ತಿದೆ ಇನ್ನೂ ಇದೇ ಮೊದಲ ಬಾರಿಗೆ ಕಡೂರು ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಬೆಳ್ಳಿ ಪ್ರಕಾಶ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ತರೀಕೆರೆ ಮೂಡಿಗೆರೆ ಕಡೂರು ಕ್ಷೇತ್ರದ ಶಾಸಕರಿಗೆ ನ್ಯಾಯಬದ್ಧವಾಗಿ ಸಿಗಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ ಒಂದು ವೇಳೆ ಜಿಲ್ಲೆಯಲ್ಲಿರುವ ನಾಲ್ವರು ಬಿಜೆಪಿ ಶಾಸಕರ ಪೈಕಿ ಸಿಟಿ ರವಿ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಮಣೆ ಹಾಕಿದ್ದಲ್ಲಿ ಜಿಲ್ಲೆಯ ಇತರ ಶಾಸಕರು ಅಸಮಾಧಾನಗೊಳ್ಳುವುದರಲ್ಲಿ ಎರಡು ಮಾತಿಲ್ಲ ಈಗಾಗಲೇ ಸಿಟಿ ರವಿ ವಿರುದ್ಧ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಜಗಜ್ಜಾಹೀರಾಗಿದೆ