ಮೂಡಿಗೆರೆ: ಕನ್ನಡ ನಾಡಿನ ಹೆಮ್ಮೆಯ ಪುತ್ರ ಬಾಲ ನಟನೆಯಲ್ಲೇ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೊಡ್ಡಮನೆ ಹುಡುಗ ಪವರ್ ಸ್ಟಾರ್ ಖ್ಯಾತಿಯ ಅಪ್ಪು ಪುನೀತ್ ರಾಜಕುಮಾರ್ ಇಂದು ತೀವ್ರ ಹೃದಯಘಾತದಿಂದ ಸಾವನ್ನಪಿದ್ದಾರೆ, ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿದ ಅಪ್ಪುಗೆ ಇದು ಮೂಡಿಗೆರೆ ಬಿಜೆಪಿ ಯುವಮೋರ್ಚಾ ಹಾಗೂ ಅಪ್ಪು ಅಭಿಮಾನಿಗಳಿಂದ ಮೂಡಿಗೆರೆಯಾ ಲಯನ್ಸ್ ವೃತ್ತದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಒಂದು ನಿಮಿಷದ ಮೌನಾಚಾರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹಳಸೆ ಶಿವಣ್ಣ, ರಘು ಜನ್ನಾಪುರ, ಧರ್ಮಪಾಲ್ ಗುತ್ತಿ, ಅವಿನಾಶ್ ಜನ್ನಾಪುರ, ಪ್ರವೀಣ್ ಪೂಜಾರಿ, ಅನಿಲ್, ಗಿರೀಶ್, ಭರತ್ ಅರುಣ್,ಮನೋಜ್, ನಯನ್, ಸಂತೋಷ್, ಆಶಿಕ್, ದಶರಥ್, ಶಿವರಾಮ್ ಮುಂತಾದವರು ಉಪಸ್ಥಿತರಿದ್ದರು
