ಅಪಘಾತದಲ್ಲಿ ಮೃತಪಟ್ಟ ಕೋತಿಯ ಶಾಸ್ತ್ರೋಕ್ತ ಅಂತ್ಯಸಂಸ್ಕಾರ ನೆರವೇರಿಸಿದ ಮತ್ತಿಕಟ್ಟೆ ಹರೀಶ್ ಹಾಗೂ ಯುವಕರ ಕಾರ್ಯಕ್ಕೆ ಶ್ಲಾಘನೆ

ಚಾರ್ಮಾಡಿಯ ಘಾಟಿಯಲ್ಲಿ ಭಾನುವಾರ ರಸ್ತೆ ದಾಟುತ್ತಿದ್ದಾಗ ಕೋತಿಗೆ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಕೋತಿ ಸಾವಿಗೀಡಾಗಿದ್ದು, ಇದ ಕಂಡ ದಾರಿಹೋಕರ ಕರುಳು ಹಿಂಡುವಂತಾಗಿದೆ. ಅಪಘಾತ ಮಾಡಿದ ಕಾರು ನಿಲ್ಲಿಸದೆ ಹೋಗಿದ್ದರಿಂದ ಕೋತಿ ನರಳುತ್ತ ರಸ್ತೆ ಮದ್ಯದಲ್ಲೇ ಪ್ರಾಣಬಿಟ್ಟಿದೆ .

ಅಲೇಖಾನ್ ನಲ್ಲಿ ವಾರ್ಷಿಕ ಪೂಜೆ ಮುಗಿಸಿಕೊಂಡು ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತಿಕಟ್ಟೆಯ ಹರೀಶ್ ಹಾಗೂ ಜಾವಳೆ ಗ್ರಾಮದ ಯುವಕರು ವಾಹನವನ್ನು ನಿಲ್ಲಿಸಿ ಕೂಡಲೇ ಕೋತಿಯ ಮೃತದೇಹವನ್ನ ರಸ್ತೆಯಿಂದ ಎತ್ತಿಕೊಂಡು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಲ್ಲೇ ಸಮೀಪದಲ್ಲೇ ಮಣ್ಣು ಮಾಡುವ ಮೂಲಕ ಅಂತ್ಯ ಸಂಸ್ಕಾರ ‌ನಡೆಸಿದರು. ಯುವಕರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


ವರದಿ ✍️ಸೂರಿ ಬಣಕಲ್