ಬಣಕಲ್ : ಚಕ್ಕಮಕ್ಕಿ, ಬಗ್ಗಸಗೋಡು, ಫಲ್ಗುಣಿ, ಹೊರಟ್ಟಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ದತ್ತ ಜಯಂತಿ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿ ಶಾಂತಿಯುತವಾಗಿ ನಡೆಸಲಾಯಿತು.
ದತ್ತ ಮಾಲದಾರಿಗಳು ಬೈಕ್ ನಲ್ಲಿ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತ ಶಾಂತಿಯುತವಾಗಿ ರಸ್ತೆಯಲ್ಲಿ ದೇವರ ನಾಮ ಸ್ಮರಣೆ ಮಾಡುತ್ತ ಸಾಗುವ ದೃಶ್ಯ ಬೆಳಗ್ಗೆಯಿಂದ ರಾತ್ರಿವರೆಗೂ ಕಂಡಿತ್ತು.ಬಣಕಲ್ ನಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾಗಿ ನಿಭಾಯಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ವಾಹನಗಳು ದತ್ತ ಜಯಂತಿಗೆ ಚಿಕ್ಕಮಗಳೂರಿಗೆ ತೆರಳಿದ್ದವು. ಬಣಕಲ್,ಕೊಟ್ಟಿಗೆಹಾರ ಸುತ್ತಮುತ್ತ ಬಂದ್ ಶಾಂತಿಯುತವಾಗಿತ್ತು. ಮೆಡಿಕಲ್ , ಪೆಟ್ರೋಲ್ ಬಂಕ್, ಪತ್ರಿಕೆಗಳು,ಹಾಲು ಸರಬರಾಜು ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿತ್ತು.
ಬಣಕಲ್ ಸುತ್ತಮುತ್ತ ಸಂಪೂರ್ಣ ಬಂದ್ ಯಶಸ್ವಿಯಾಗಿದೆ. ದತ್ತ ಪೀಠಕ್ಕೆ ಸಾಗಿದ ಎಲ್ಲಾ ವಾಹನಗಳ ಮಾಹಿತಿ ಕಲೆ ಹಾಕಿ ಬಿಡಲಾಗಿತ್ತು ಎಂದು ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ಮಾಹಿತಿ ನೀಡಿದರು.
ವರದಿ :✍️ಸೂರಿ ಬಣಕಲ್