ಕಪುಚಿನ್ ಕೃಷಿಕ್ ಸೇವಾ ಕೇಂದ್ರ ವಿಮುಕ್ತಿ ಬಣಕಲ್ ಮತ್ತು ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಮಾದಕ ವಸ್ತುಗಳ ದುಷ್ಪರಿಣಾಮಗಳು ಕುರಿತಂತೆ ಮಾಹಿತಿ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ನವೀನ್ ಆನೆದಿಬ್ಬ ಮಾತನಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರೌಢಾವಸ್ಥೆಯಲ್ಲಿ ಬೆಳೆಯುವಾಗ ಸರಿಯಾದ ಮಾರ್ಗದರ್ಶನ ಮತ್ತು ಉತ್ತಮ ತತ್ವ ಸಿದ್ಧಾಂತಗಳ ಅಡಿಯಲ್ಲಿ ಬೆಳೆಯಬೇಕು ಶಾಲೆಯಲ್ಲಿ ಪೂರಕ ವಾತಾವರಣ ಇರುವಾಗ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು ತಂಬಾಕು ಮತ್ತು ಗುಟ್ಕಾ ಕಂಪನಿಗಳ ಜಾಹೀರಾತುಗಳಿಗೆ ಮಾರುಹೋಗದೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ತಂಬಾಕು ಧೂಮಪಾನ ಮದ್ಯಪಾನ ಇನ್ನಿತರ ಕೆಟ್ಟ ಚಟಗಳಿಂದ ದೂರ ಉಳಿಯಬೇಕು ಕೆಟ್ಟ ಚಟಗಳಿರುವ ಸ್ನೇಹಿತರ ಸಹವಾಸ ಮರಣಕ್ಕೆ ಸಮವಾದಂತೆ ಎಂದು ಕಿವಿ ಮಾತು ಹೇಳಿದರು.
ತರುವೆ CHO ಬಬಿತಾ ರವರು ಮಕ್ಕಳ ಮೇಲಿನ ಪ್ರೌಢಾವಸ್ಥೆ ಬದಲಾವಣೆ ಸಹಜಕರ ಇದಕ್ಕೆ ಮುಜುಗರ ಪಟ್ಟುಕೊಳ್ಳದೆ ಪೋಷಕರೊಂದಿಗೆ ಮತ್ತು ವೈದ್ಯರೊಂದಿಗೆ ಹಂಚಿಕೊಂಡಲ್ಲಿ ಸೂಕ್ತ ಸಲಹೆ ಮತ್ತು ಪರಿಹಾರ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ತರುವೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲ ಸದಸ್ಯರಾದ ಸ್ಮಿತಾ ಮುಖ್ಯ ಶಿಕ್ಷಕರಾದ ಭಾಗ್ಯ ಶಿಕ್ಷಕರಾದ ಕಿರಣ್ ಕುಮಾರ್ ಶೈನಿ ತಂಬಿ ನೌಶಿಭ ಸತೀಶ್ ಲಾರೆನ್ಸ್, ರಿಶಾಲ್ ವಿಮಕ್ತಿ ಬಣಕಲ್ ಕಾರ್ಯಕರ್ತರಾದ ವಿಂದ್ಯಾ ಮತ್ತು ದೀಕ್ಷಿತ್ ಇತರರು ಇದ್ದರು