ಬಣಕಲ್ ನಲ್ಲಿ ನಾವುಗಳು ದೂರದ ಊರುಗಳಿಂದ ಬರುವಾಗ ಯಾವುದಾದರು ಸ್ಥಳ ಪರಿಚಯ ಹೇಳಬೇಕಂದರೆ ನಮಗೆ ಮೊದಲಿಗೆ ನೆನಪಾಗುವುದೇ ಬಣಕಲ್ ರೈಸ್ ಮಿಲ್ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಕೆ ಎಂ ರಸ್ತೆಯಲ್ಲಿರುವ ಹಳೆಯ ರೈಸ್ ಮಿಲ್ ಹೆಸರು ಚಿರಪರಿಚಿತ.
ಸುಮಾರು 70-80ವರ್ಷಗಳ ಇತಿಹಾಸವಿರುವ ಬಣಕಲ್ ರೈಸ್ ಮಿಲ್ ಇತ್ತೀಚೆಗೆ ಶೀತಲಗೊಂಡ ಹಿನ್ನಲೆ ಅದನ್ನು ಕೆಡವಲಾಯಿತು. ಇಷ್ಟು ವರ್ಷಗಳ ಕಾಲ ರೈತರಿಗಾಗಿ ಕಾರ್ಯ ನಿರ್ವಹಿಸಿದ್ದ ರೈಸ್ ಮಿಲ್ ಈಗ ನೆನಪು ಮಾತ್ರ ಎಂದು ಊಹಿಸಿಕೊಳ್ಳಲು ನಿಜಕ್ಕೂ ಬೇಸರ ತರಿಸುತ್ತದೆ.
ಬಣಕಲ್ ರೈಸ್ ಮಿಲ್ ಗೆ ಆದರದೆ ಆದ ದೊಡ್ಡ ಇತಿಹಾಸವಿದೆ. ಆಗಿನ ಕಾಲದಲ್ಲಿ ಬಣಕಲ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಅತೀ ಹೆಚ್ಚು ರೈತರು ಬತ್ತ ಬೆಳೆಯನ್ನು ಬೆಳೆಯುತ್ತಿದ್ದರು, ಆದರೆ ಬೆಳೆದ ಬತ್ತವನ್ನು ಗಿರಾಣಿಗೆ ತೆಗೆದುಕೊಂಡು ಹೋಗಬೇಕು ಎಂದರೆ ತಾಲ್ಲೂಕು ಕೇಂದ್ರ ಅಥವಾ ಜಿಲ್ಲಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗಬೇಕಿತ್ತು.
ಕಾಫಿ ಬೆಳೆಗಾರರಾದ ರಾಮಚಂದ್ರ ಗೌಡರು ಅವರ ಸಹೋದರ ನಾಗೇಶ್ ಗೌಡರು ಸೇರಿ ಬಣಕಲ್ ನಲ್ಲಿ ಅಕ್ಕಿ ಗಿರಣಿ ಪ್ರಾರಂಭಿಸುತ್ತಾರೆ, ಇದರಿಂದ ಜನರು ಪಡುತ್ತಿರುವ ಕಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿದರು. ಇದು ಹೊರ ಊರುಗಳಿಂದ ಬರುವ ರೈತರಿಗೆ ಅನುಕೂಲವಾಯಿತು. ಸ್ಥಳೀಯ ಜನರಿಗೆ ಉದ್ಯೋಗ ಒದಗಿಸಿದರು ಹೀಗೆ ಇತ್ತೀಚ್ಚಿನವರೆಗೂ ರೈಸ್ ಮಿಲ್ ಕಾರ್ಯ ನಿರ್ವಹಿಸುತ್ತಾ ಬಂದಿತ್ತು.
ಇತ್ತೀಚ್ಚಿನ ದಿನಗಳಲ್ಲಿ ರೈತರು ಬತ್ತ ಬೆಳೆಯುವುದನ್ನು ನಿಲ್ಲಿಸಿದ ಕಾರಣ ಹಲವು ವರ್ಷಗಳ ಕಾಲ ಅಳಿದ್ದ ರೈಸ್ ಮಿಲ್ ಇತ್ತೀಚೆಗೆ ತನ್ನ ಕಾರ್ಯ ಚಟುವಟಿಕೆಯನ್ನು ಸ್ಥಗಿತ ಗೊಳಿಸಿತ್ತು. ಹೀಗೆ ದಶಕಗಳ ಕಾಲ ಅಳಿದ್ದ ರಾಮಚಂದ್ರ ಗೌಡ ಹಾಗೂ ನಾಗೇಶ್ ಗೌಡರ ಒಡೆತನದ ರೈಸ್ ಮಿಲ್ ನೆಲಕ್ಕುರುಳಿದರೂ ಕೂಡ ಅದರ ಛಾಯೆ ಎಂದಿಗೂ ಸಹ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ವರದಿ ✍️ಸೂರಿ ಬಣಕಲ್