ಬಣಕಲ್ : ನಾಡೀನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದ್ದು, ಬಣಕಲ್ ಪೊಲೀಸ್ ಠಾಣೆಯಲ್ಲಿ ಇಂದು ಆಯುಧ ಪೂಜೆ ನಡೆಯಿತು.
ಸದಾ ಗತ್ತು ಗಾಂಭೀರ್ಯದಿಂದಿರುವ ಪೊಲೀಸ್ ಠಾಣೆ ವಿವಿಧ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿತ್ತು. ವಾಹನ, ಪಿಸ್ತೂಲ್, ಬೇಡಿ, ಹೀಗೆ ಠಾಣೆಯಲ್ಲಿರುವ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು.
ಈ ವೇಳೆ ಠಾಣೆಯ ಪಿ ಎಸ್ ಐ ರೇಣುಕಾ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಬಣಕಲ್ ಠಾಣಾ ಪಿ,ಎಸ್ ಐ ರೇಣುಕಾ ದಸರಾ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವಿನ ಸಂಕೇತವಾಗಿದೆ. ಎಲ್ಲರಿಗೂ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಎಂದರು.
ವರದಿ ✍️ಸೂರಿ ಬಣಕಲ್