ಬಣಕಲ್ : ಕೆಲಸ ಮುಗಿಸಿ ಮನೆಗೆ ಬಂದಾಗ ಕಿಲಕಿಲ ಆಟವಾಡಬೇಕಾಗಿದ್ದ ಮಗು ಕಣ್ಣಿನ ಕಾಯಿಲೆಯಿಂದ ರೋಸುತ್ತಿದೆ… ಕರುಳಕುಡಿಯ ಈ ಕಷ್ಟ ನೋಡುತ್ತಾ ಕಣ್ಣೀರು ಹಾಕುವ ಪತ್ನಿ, ಅಸಹಾಯಕ ದಂಪತಿಯ ಕರುಣಾಜನಕ ಕತೆ.
ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದ ಅನಿಲ್ ನಯನ ಆಚಾರ್ಯ ದಂಪತಿಯ ಒಂದು ವರ್ಷದ ಮಗಳು ತಪಸ್ಯಾಗೆ ಹುಟ್ಟಿನಿಂದಲೇ ಒಂದು ಕಣ್ಣು ಕುರುಡಾಗಿದೆ. ಆರಂಭದಲ್ಲಿ ಸಮಸ್ಯೆ ಪೋಷಕರಿಗೆ ತಿಳಿದಿರಲಿಲ್ಲ ನಂತರದ ದಿನಗಳಲ್ಲಿ ಮಗುವಿನ ಕಣ್ಣಿನ ಮದ್ಯಭಾಗ ಬಿಳಿಯಗುತ್ತಾ ಬಂದಿದೆ. ಇದರಿಂದ ಕಂಗಲಾದ ಪೋಷಕರು ವೈದ್ಯರನ್ನು ಸಂಪರ್ಕಿಸಿದಾಗ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸ ಬೇಕು ಅದಕ್ಕೆ 10ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಸುದ್ದಿ ತಿಳಿದು ಬಡ ಕುಟುಂಬಕ್ಕೆ ಆಕಾಶವೇ ಧರೆಗುಳಿದಂತೆ ಆಗಿದೆ. ಒಂದು ಕಡೆ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಇಲ್ಲವಾದಲ್ಲಿ ಕಣ್ಣು ಕಳೆದುಕೊಳ್ಳುವ ಭೀತಿ ಇನ್ನೊಂದು ಕಡೆ ಅಷ್ಟು ದೊಡ್ಡ ಮೊತ್ತ ಹೊಂದಿಸುವ ಅಸಾಯಕತೆ. ಇದರಿಂದ ಕುಟುಂಬ ದಾನಿಗಳ ಮೊರೆ ಹೋಗಿದ್ದಾರೆ. ಸಂಘ, ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸಹೃದಯಿ ಸಾರ್ವಜನಿಕರ ನೆರವಿಗೆ ದಂಪತಿ ಮನವಿ ಮಾಡಿದ್ದಾರೆ.
ಸಹಾಯ ಹಸ್ತ ನೀಡುವವರು ಮೊ : 7760080450, 8762362472. ಅಥವಾ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 110052456009 ifsi code = cnrb 0010911