ಬೆಟ್ಟಿಗೆರೆಯ ನಿವೃತ್ತ ಗ್ರಾಮೀಣ ಅಂಚೆ ನೌಕರ ನಾಗರಾಜ್ ರವರಿಗೆ ಬಣಕಲ್ ಅಂಚೆ ಕಚೇರಿಯಲ್ಲಿ ಬೀಳ್ಕೊಡುಗೆ

ಬಣಕಲ್ :ಬೆಟ್ಟಿಗೆರೆ ಅಂಚೆ ಕಚೇರಿಯಲ್ಲಿ ಕಳೆದ 40ವರ್ಷಗಳಿಂದ ಅಂಚೆ ನೌಕರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೆ ಅ.30ರಂದು ಸೇವಾ ನಿವೃತ್ತಿ ಹೊಂದಿದ ನಾಗರಾಜ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬಣಕಲ್ ಅಂಚೆ ಕಚೇರಿಯಲ್ಲಿ ಸಹದ್ಯೋಗಿಗಳಿಂದ ನಡೆಯಿತು.

ಬಣಕಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಂದ್ರ ರವರು ಮಾತನಾಡಿ ನಾಗರಾಜ್ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಸುದೀರ್ಘ ವರ್ಷಗಳ ಕಾಲ ಅವರು ಬೆಟ್ಟಿಗೆರೆ ಅಂಚೆ ಕಚೇರಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಇಂದು ಅವರನ್ನು ಸನ್ಮಾನಿಸುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬೆಟಗೆರೆ ಪೋಸ್ಟ್ ಮಾಸ್ಟರ್ ಪ್ರಕಾಶ್ ಭಟ್, ಬಣಕಲ್ ಪೋಸ್ಟಲ್ ಅಸಿಸ್ಟೆಂಟ್ ರವಿಕುಮಾರ್ ಹೆಗ್ಗುಡ್ಲು ಮಂಜುನಾಥ್, ನಿಶಾಂತ್ ಬಣಕಲ್, ಗೀತಾ ಕೆಂಜೆಗೆ, ಅನ್ನಪೂರ್ಣ ಪಲ್ಗುಣಿ, ರೂಪ, ಪುಷ್ಪ, ರವೀಂದ್ರ, ದೇವರಾಜ್ ಅಭಿಷೇಕ್ ಗುತ್ತಿ, ನಾಗರಾಜ್ ಕೊಟ್ಟಿಗೆಹಾರ ಮತ್ತಿತರರು ಹಾಜರಿದ್ದರು.

ವರದಿ ✍️ಸೂರಿ ಬಣಕಲ್