ಬಣಕಲ್ ಕೆ.ಎಸ್. ಗೋಪಾಲ್ ಆಚಾರ್ ಮತ್ತು ನಟರಾಜ್ ರವರ ಲೇ ಔಟ್ ರಾತ್ರಿ ಆಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ಅಡ್ಡವಾಗುತ್ತಿದೆ

ಬಣಕಲ್ ನಲ್ಲಿರುವ ಗೋಪಾಲ್ ಆಚಾರ್ ಮತ್ತು ನಟರಾಜ್ ರವರಿಗೆ ಸೇರಿದ ಲೇಔಟ್ ರಾತ್ರಿ ಆಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡಾಗುತ್ತಿದೆ. ಇದರ ಬಗ್ಗೆ ಮಾತನಾಡಿದ ಲೇಔಟ್ ಮಾಲೀಕರಾದ ಗೋಪಾಲ್ ಆಚಾರ್ ಖಾಲಿ ಲೇಔಟ್ ಆದಕಾರಣ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಇದರಿಂದ ಅವರಿಗೆ ಯಾರ ಭಯವು ಇರುವುದಿಲ್ಲ . ಸಂಜೆಯಾದರೆ ಸಾಕು ವಾಹನಗಳಲ್ಲಿ ಇಲ್ಲಿಗೆ ದೌಡಾಯಿಸಿ ಅಕ್ರಮ ಚಟುವಟಿಕೆ ಗಳಲ್ಲಿ ತೊಡಗುತ್ತಾರೆ. ಮಧ್ಯರಾತ್ರಿವರೆಗೆ ಮದ್ಯಪಾನ ಮಾಡುತ್ತ ಜೋರಾಗಿ ಕಿರುಚುತ್ತ ಕಿರಿ ಕಿರಿ ಉಂಟುಮಾಡುತ್ತಿದ್ದಾರೆ ಎಂದು ಜನರಿಂದ ದೂರುಗಳು ಬಂದಿವೆ ಎಂದರು.

ನಿವೇಶನದಲ್ಲಿ ರಾಶಿ ರಾಶಿ ಮದ್ಯದ ಖಾಲಿ ಬಾಟಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೆಲವರು ಕುಡಿದ ಅಮಲಿನಲ್ಲಿ ಬಾಟಲಿಗಳನ್ನು ಹೊಡೆದು ಕಾಲಿಡದಂತೆ ಮಾಡಿದ್ದಾರೆ. ಅಕ್ಕಪಕ್ಕದಲ್ಲಿ ಹಲವು ಮನೆಗಳಲ್ಲಿ ಜನರು ವಾಸವಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ಮುಂಚೆಯೂ ಒಮ್ಮೆ ಅಕ್ರಮ ಚಟುವಟಿಕೆ ಮಾಡುವವರಿಗೆ ಎಚ್ಚರಿಕೆ ನೀಡಿದರೂ ಸಹಿತ ತಮ್ಮ ಚಾಳಿ ಮುಂದುವರಿಸಿದ್ದಾರೆ ಎಂದರು. ಅಕ್ರಮ ಚಟುವಟಿಕೆಗಳ ಬಗ್ಗೆ ಗಮನ ಹರಿಸದಿದ್ದರೆ ಮುಂದೆ ದೊಡ್ಡ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ಈ ಬಗ್ಗೆ ಲೇ ಔಟ್ ಮಾಲೀಕರು ತಕ್ಷಣಕ್ಕೆ ಬ್ರೇಕ್ ಹಾಕುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವರದಿ :✍️ಸೂರಿ ಬಣಕಲ್