ಬಣಕಲ್: ಜಟ್ಟಿಗ ದೇವರು ಹಾಗೂ ಚೌಡೇಶ್ವರಿ ದೈವದ ಆಶೀರ್ವಾದದೊಂದಿಗೆ ಭಾನುವಾರ ಹೆಗ್ಗುಡ್ಲು ಗ್ರಾಮದಲ್ಲಿ ದೇವಸ್ಥಾನ ಪುನರ್ ಪ್ರತಿಷ್ಟಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಗ್ಗೆ 8:00ಗಂಟೆಗೆ ಪ್ರತಿಷ್ಟಾ ಹೋಮ, ಚಂಡಿಕಾ ಹೋಮ, 10:56ಮಿಥುನ ಲಗ್ನದಲ್ಲಿ ಬ್ರಹ್ಮ ಕಲಶ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಪ್ರತಿಷ್ಠಾ ಮಹೋತ್ಸವ ಪರ್ವಕಾಲದಲ್ಲಿ ಸರ್ವರಿಗೂ ಜಟ್ಟಿಗ ಮತ್ತು ಚೌಡೇಶ್ವರಿ ಸರ್ವತ್ರ ಮಂಗಳವನ್ನು ಆರೋಗ್ಯ ಭಾಗ್ಯವನ್ನು ಲೋಕಕ್ಕೆ ದಯ ಪಾಲಿಸಲಿ ಎಂದು ಗ್ರಾಮಸ್ಥರು ದೇವರಲ್ಲಿ ಬೇಡಿಕೊಂಡರು. ದೇವರ ಪೂರ್ಣಾನುಗ್ರಹಕ್ಕೆ ಪ್ರತಿಷ್ಠಾ ವರ್ಧ್ಯಂತೋತ್ಸವವು ಕಾರಣವಾಗಲಿ. ಇದರ ಮಹಾ ಫಲವನ್ನು ಸಮಸ್ತ ಸಜ್ಜನರೂ ಆಸ್ವಾದಿಸಿ, ಸುಭಿಕ್ಷೆ ನೆಲೆಸಲಿ, ದೇವರ ಪಾದ ಸೇವೆಯನ್ನು ಇನ್ನೂ ಅಧಿಕವಾಗಿ ಮಾಡಿಸಿಕೊಂಡು ಸರ್ವರನ್ನೂ ಅನುಗ್ರಹಿಸಲಿ ಎಂದು ದೈವದ ಬಳಿ ಪ್ರಾರ್ಥಿಸಿದರು.
ಮದ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದರು. ಸುತ್ತಮುತ್ತಲಿನಿಂದ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ದೈವದ ದರ್ಶನ ಪಡೆದು ಪುನೀತರಾದರು.
ವರದಿ :✍️ಸೂರಿ ಬಣಕಲ್