ರಾಕೇಶ್ ಆತ್ಮಕ್ಕೆ ಶಾಂತಿ ಕೋರಿ ಮೂಡಿಗೆರೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ದತ್ತಪೀಠದಲ್ಲಿ ಮೌನಚರಣೆ

ಬಣಕಲ್ :ರಾಜ್ಯದ ಕಲ್ಯಾಣ ಕರ್ನಾಟಕ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಶಹಾಪುರ ಪೇಟ್ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವಕ ರಾಕೇಶ್‌ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು, ಘಟನೆಯ ಈ ಸಂಬಂಧ ರಾಕೇಶ ಆತ್ಮಕೆ ಶಾಂತಿ ಸಿಗಲಿ ಹಾಗೂ ಕೊಲೆ ಆರೋಪಿಗೆ ಗಲ್ಲುಶಿಕ್ಷೆ ಆಗಲಿ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡಿಗೆರೆ ವತಿಯಿಂದ ದತ್ತಪೀಠದಲ್ಲಿ ಮೌನಚರಣೆ ಮಾಡಲಾಯಿತು.

ಬಜರಂಗದಳ ತಾಲೂಕು ಸಂಹಯೋಜಕ ಅಜಿತ್ ಜೈನ್ ಬೈಲ್,, ಜಿಲ್ಲಾ ಸಹ ಸಂಹಯೋಜಕ ಅಭಿಷೇಕ್, ತಾಲೂಕು ಸಹ ಸಂಹಯೋಜಕರಾದ ಸಂತೋಷ್, ಪ್ರಣೀತ್, ಗೋಣಿಬಿಡು ಹೋಬಳಿ ಸಂಹಯೋಜಕ ಕಾರ್ತಿಕ್ ಕನ್ನೆಹಳ್ಳಿ,, ಸಿಜಿತ್, ನವೀನ್, ಮಧು, ಲಕ್ಷ್ಮೀಕಾಂತ್, ನಿಕಿತ್, ಸುಜನ್, ಪುಟ್ಟರಾಜು, ಅಕ್ಷಯ್ ಇನ್ನಿತರ ಕಾರ್ಯಕರ್ತರು ಇದ್ದರು.