ಬಣಕಲ್: ಬಣಕಲ್ ನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಹಲವಾರು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರಕಿದೆ.
ಇಂದು ಬಣಕಲ್ ಮುಖ್ಯರಸ್ತೆಯಲ್ಲಿರುವ ಗ್ರಾಮ ಪಂಚಾಯಿತಿಯ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕ ಭಾನುರವರು ಬಸ್ ಸ್ಟ್ಯಾಂಡ್ ನ ಶಂಕು ಸ್ಥಾಪನೆ ನೇರವೇರಿಸಿದರು. ಪ್ರಯಾಣಿಕರಿಗೆ ಸರಿಯಾದ ತಂಗುದಾಣವಿಲ್ಲದೆ ಮಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಮುಂದುವರಿದಿತ್ತು ಸಾರ್ವಜನಿಕ ಸಂಘಟನೆಗಳು ಹಲವು ಬಾರಿ ಇದಕ್ಕೆ ಶಾಶ್ವತ ಪರಿಹಾರ ಕೊಡಲು ಮನವಿ ಮಾಡಿದ್ದರು. ಈಗ ಬಣಕಲ್ ಗ್ರಾಮ ಪಂಚಾಯಿತಿಯ ಈ ನಡೆ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸಂತಸ ಉಂಟು ಮಾಡಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಇರ್ಫಾನ್ ರವರು ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿ ಬಣಕಲ್ ಜನರು ಸೂಕ್ತ ತಂಗುದಾಣ ವಿಲ್ಲದೆ ಸಮಸ್ಯೆ ಎದುತಿಸುತ್ತಿದ್ದರು. ನಾವು ಅಧಿಕಾರಕ್ಕೆ ಬಂದಾಗ ನಮ್ಮ ಮೊದಲ ಆದ್ಯತೆ ಜನರಿಗೆ ಬಸ್ ತಂಗುದಾಣ ನಿರ್ಮಿಸುವುದು ಅದರಂತೆ ಈಗ ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಕ್ರಿಯಾಯೋಜನೆ ತಯಾರಾಗಿದೆ ವರ್ಗ ಒಂದರಲ್ಲಿ ಗ್ರಾಮ ಪಂಚಾಯಿತಿ ಅನುದಾನ ಹಾಗೂ ಶಾಸಕರ ಅನುದಾನ ಸೇರಿ ಸುಸಜ್ಜಿತ ಬಸ್ ತಂಗುದಾಣ ಕಾಮಗಾರಿ ಆರಂಭಿಸಲಾಗುವುದು ಎಂದರು. ಉಪಾಧ್ಯಕ್ಷ ಅದಂ ಮಾತನಾಡಿ ಮುಂದಿನ ಮಳೆಗಾಲದೊಳಗೆ ಬಸ್ ತಂಗುದಾಣ ಜನರಿಗೆ ಲಭ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಉಪಾಧ್ಯಕ್ಷರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎನ್. ಕೃಷ್ಣಪ್ಪ ಹಾಗೂ ಸರ್ವ ಸದಸ್ಯರುಗಳು ಹಾಜರಿದ್ದರು.
✍️ವರದಿ :ಸೂರಿ ಬಣಕಲ್