ಬಣಕಲ್ : ಶಿವ ರಾತ್ರಿ ಪ್ರಯುಕ್ತ ನಡೆದ ಬಣಕಲ್ ವಿಲೇಜ್ ನ ಶ್ರೀಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವವು ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗ್ಗಿನಿಂದ ದೇವಸ್ಥಾನದಲ್ಲಿ ಪೂಜಾ ವಿಧಿಗಳು ನಡೆಯಿತು .ಸಂಜೆ 5ಗಂಟೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ರಥಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ವಾದ್ಯಗೋಷ್ಠಿಗೆ ಭಕ್ತರು ರಥದ ಮುಂಭಾಗ ಕುಣಿದು ಕುಪ್ಪಳಿಸಿದರು. ಭಕ್ತರು ರಥವನ್ನು ಎಳೆಯುತ್ತ ದೇವರ ಸ್ಮರಣೆ ಮಾಡುತ್ತ ಮೆರವಣಿಗೆ ಸಾಗಿದರು. ಸಾವಿರಾರು ಭಕ್ತರು ರಥೋತ್ಸವದ ದೃಶ್ಯ ವನ್ನು ಕಣ್ತುಂಬಿಕೊಂಡರು.2ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಜಾತ್ರೆ ಸೋಮವಾರ ಸಂಜೆ ಮುಕ್ತಾಯ ವಾಯಿತು.