ರಾಮನ ಪಟ್ಟಾಭಿಷೇಕಕ್ಕೆಭಕ್ತರ ಸಂಭ್ರಮ:ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಣಕಲ್ : ಅಯೋದ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಮದ್ಯಾಹ್ನ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕೂಡ ಮಾಡಲಾಯಿತು.

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ರಾತ್ರಿ ದೇವಸ್ಥಾನದಲ್ಲಿ ರಾಜ ಜ್ಯೋತಿ ಬೆಳಗಿಸಿ ಪ್ರಭು ಶ್ರೀರಾಮನನ್ನು ಮನೆಗೆ ಆಹ್ವಾನಿಸಲಾಯಿತು.

ಬಣಕಲ್ ನಲ್ಲಿ ಪ್ರತಿ ರಾಮ ಭಕ್ತರ ಮನೆಮನೆಗಳಲ್ಲೂ ದೀಪಗಳನ್ನು ಬೆಳಗಿಸಲಾಗಿತ್ತು . ಸಾರ್ವಜನಿಕ ಸ್ಥಳ, ರಸ್ತೆ ಬದಿ, ದೇವಸ್ಥಾನ, ಮಠ, ಮಂದಿರಗಳಲ್ಲೂ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬದ ವಾತಾವರಣ ನಿರ್ಮಾಣವಾಯಿತು. ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯನ್ನು ದೇವಸ್ಥಾನದಲ್ಲಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯಂತೆ ಆಚರಿಸಲಾಯಿತು ಮಹಿಳೆಯರು ಮಕ್ಕಳು ರಾಮ ಭಜನೆ ಮಾಡುವುದರ ಮೂಲಕ ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ದ ಗೊಳಿಸಿದರು.

ವರದಿ :✍️ಸೂರಿ ಬಣಕಲ್