ಬಣಕಲ್ :ರಾಜ್ಯಾದ್ಯಂತ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಗುರುವಾರ ಬೆಳಗ್ಗೆಯಿಂದ ಮಲೆನಾಡು ಭಾಗದಲ್ಲಿ ಸುರಿದ ತುಂತುರು ಮಳೆಯಿಂದಾಗಿ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬತ್ತವನ್ನು ಕೊಯ್ಲು ಮಾಡಿದ ಎರಡು ದಿನದಲ್ಲಿ ಒಕ್ಕಿ ರಾಶಿ ಮಾಡಲೇಬೇಕು. ಕೆಲವಡೆ ಕೊಯ್ದ ಬತ್ತವನ್ನು ಗದ್ದೆಗಳಲ್ಲೆ ಬಿಡಲಾಗಿದೆ, ಇನ್ನು ಕೆಲವಡೆ ಒಕ್ಕಲು ನಡೆಯುತ್ತಿದ್ದು ಫಸಲು ಗದ್ದೆಯಲ್ಲಿ ನೆನೆಯುವಂತಾಗಿದೆ. ಹೀಗಾಗಿ ಬತ್ತದ ತೆನೆ ಅಲ್ಲೆ ಮೊಳಕೆ ಒಡೆಯುವ ಅಪಾಯವಿದೆ. ಇನ್ನು ಕಾಫಿ ಬೆಳೆಗಾರರದ್ದು ಮತ್ತೊಂದು ಸಮಸ್ಯೆ ಕಳೆದ ಡಿಸಂಬರ್ ನಲ್ಲಿ ಬೆಳೆಗಾರರು ಹಣ್ಣು ಕೊಯ್ಲು ಪ್ರಾರಂಭಿಸಿದ್ದರು. ಕೊಯ್ದ ದಿನವೇ ಸಿಪ್ಪೆ ಸುಲಿಯಲು ಪಲ್ಪರ್ ಮಾಡುತ್ತಾರೆ. ಇದಾದ ಬಳಿಕ ಕನಿಷ್ಠ ನಾಲ್ಕೈದು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಆದರೆ ಬಿಸಿಲು ಇಲ್ಲದೆ ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಎರಡು ದಿನಗಳಿಂದ ಮಳೆ ಆಗುತ್ತಿರುವುದರಿಂದ ಕಾಫಿ ಬೀಜದಲ್ಲಿ ಪಂಗಸ್ ಉಂಟಾಗಿ ಕಂದು ಬಣ್ಣಕ್ಕೆ ತಿರುಗಿದೆ ಕಣದಲ್ಲಿ ಒಣಗಿಸುವ ಹಾಕಿದ ಕಾಫಿ ನೀರಿಂದ ಕೊಳೆಯುವಂತಾಗಿದೆ.ಇದರಿಂದ ಗುಣಮಟ್ಟ ಕ್ಷೀಣಿಸುತ್ತದೆ ಮೂಡಿಗೆರೆ ತಾಲೂಕಿನಲ್ಲಿ ಅರೇಬಿಕ ಕಾಫಿ ಕೊಯ್ಲು ಆರಂಭವಾಗಿದೆ. ರೋಬಸ್ಟ ಕಾಫಿಯು ಹಣ್ಣಾಗಿದ್ದು ರೈತರ ಕೊಹ್ಲಿಗೆ ಸಿದ್ಧತೆ ನಡೆಸುತ್ತಿದ್ದಾರೆ ಈ ಮಧ್ಯೆ ಮಳೆ ಸುರಿಯುತ್ತಿರುವುದರಿಂದ ಬೆಳೆ ಗಿಡದಿಂದ ಉದುರುವಂತಾಗಿದೆ ಬೆಲೆ ಗಗನಮುಖಿಯಾಗಿದ್ದರು ಕುಯ್ಲು ಮಾಡಲಾಗದೆ ಕುಯ್ದ ಪಸಲು ಗುಣಮಟ್ಟವಿಲ್ಲದೆ ರೈತರು ಎದುರಿಸುವ ಆತಂಕ ತಲೆದೂರಿದೆ.
ವರದಿ ✍️ಸೂರಿ ಬಣಕಲ್