ಬಣಕಲ್ ನಲ್ಲಿ ದತ್ತ ಜಯಂತಿ ಶೋಭಾಯಾತ್ರೆ: ಭಕ್ತರ ಸಂಭ್ರಮ

ಬಣಕಲ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ದತ್ತಭಕ್ತರು ಬಣಕಲ್ ನಗರದಲ್ಲಿ ಬುಧವಾರ ಸಂಜೆ ಭವ್ಯ ಶೋಭಾಯಾತ್ರೆ ನಡೆಸಿದರು.

ನಗರದ ಮಹಮ್ಮಾಯಿ ದೇಗುಲ ಬಳಿಯಿಂದ ಸಂಜೆ 4ಗಂಟೆಗೆ ಶೋಭಾಯಾತ್ರೆ ಹೊರಟಿತು. ದತ್ತಾತ್ರೇಯರ ಮೂರ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ದತ್ತ ಮಾಲದಾರಿಗಳು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಕುಣಿತ ಭಜನೆ ವಾದ್ಯಗೋಷ್ಠಿ ನೋಡುಗರ ಗಮನ ಸೆಳೆಯಿತು.ಭಕ್ತರು ಗುರು ದತ್ತಾತ್ರೇಯರ ನಾಮಸ್ಮರಣೆ ಮಾಡಿದರು. ನೂರಾರು ಮಾಲಾಧಾರಿಗಳು ಮಹಿಳೆಯರು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಶೋಭಯಾತ್ರೆಗೆ ಇನ್ನಷ್ಟು ಮೆರಗು ನೀಡಿದರು.

ವರದಿ :ಸೂರಿ ಬಣಕಲ್