ಚಿಕ್ಕಮಗಳೂರು:
ಬಸವರಾಜ್ ಬೊಮ್ಮಾಯಿ ನೇತೃತ್ವದ29ಸಚಿವರನ್ನು ಒಳಗೊಂಡ ಸಚಿವ ಸಂಪುಟ ಕೊನೆಗೂ ರಚನೆಯಾಗಿದೆ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಸಚಿವ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಇದರಿಂದ ತೀವ್ರ ನಿರಾಸೆ ಮತ್ತು ಬೇಸರಗೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪರಮಾಪ್ತರಾಗಿದ್ದ ಕುಮಾರಸ್ವಾಮಿ ಪರ ಬೇರೆಯವರು ಬ್ಯಾಟಿಂಗ್ ತೀವ್ರ ಲಾಬಿ ಮಾಡದ ಹಿನ್ನಲೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಎನ್ನುವುದು ಕಾರ್ಯಕರ್ತರ ನೋವು ಸಚಿವ ಸ್ಥಾನ ಸಿಕ್ಕದಂತೆ ಮಾಡುವಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎನ್ನುವ ಆರೋಪವೂ ಇದೆ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಿಟಿ ರವಿ ರವರಿಗೆ ಸಚಿವ ಸ್ಥಾನ ಲಭ್ಯವಾಗಿತ್ತು
ಪಕ್ಷದ ರಾಷ್ಟೀಯ ಜವಾಬ್ದಾರಿ ಹೆಗಲಿಗೆ ಬಿದ್ದಹಿನ್ನಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಜಿಲ್ಲೆಯ ಉಸ್ತುವಾರಿ ಹೊಣೆ ಮತ್ತೊಮ್ಮೆ ಅನ್ಯ ಜಿಲ್ಲೆಗರ ಪಾಲಾಗಿದೆ
