ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ :ನಜರೆತ್ ಶಾಲೆಗೆ ಕಂಚಿನ ಪದಕ

ಬಣಕಲ್ :ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಸಿ.ಐ.ಎಸ್. ಸಿ.ಇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ನಜರೆತ್ ಶಾಲೆಯ ಅಧೀರತ್ ಹೆಚ್ ಎನ್, ಧೀಮಂತ್ ಎಂ, ತನ್ಮಯ್ ಗೌಡ ಡಿ ಆರ್ ಮತ್ತು ವಿಧಾತ್ ಟಿ ಗೌಡ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.

14ರ ವಯೋಮಾನದ ಬಾಲಕರ ಕರ್ನಾಟಕ ತಂಡದ ತರಬೇತುದಾರರಾಗಿ ನಜರೆತ್ ಶಾಲೆಯ ದೈಹಿಕ ಶಿಕ್ಷಕ ಪ್ರವೀಣ್ ಆರ್ ಉತ್ತಮ ತಂಡವನ್ನು ಸಜ್ಜುಗೊಳಿಸಿದ್ದರು.

ನಜರೆತ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ತನ್ಮಯ್ ಗೌಡ ಡಿ ಆರ್ ಮತ್ತು ವಿಧಾತ್ ಟಿ ಗೌಡ ನವದೆಹಲಿಯಲ್ಲಿ ನಡೆಯುವ ಸ್ಕೂಲ್‌ ಗೇಮ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ರಾಷ್ಟೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಪ್ರಾಂಶುಪಾಲೆ ಸಿಸ್ಟೆರ್ ಹಿಲ್ಡ ಲೋಬೋ ಸಂತಸ ವ್ಯಕ್ತಪಡಿಸಿದ್ದಾರೆ.*