ಸಮಾಜ ಸೇವೆಯಲ್ಲಿ ಸಿರಿವಂತ -ನಿರ್ಗತಿಕರ ಪಾಲಿನ ಆಪತ್ಬಾಂಧವ:ಸಾಜಿದ್ ಗೆ “ಅಭಿಮಾನಿ” ಪ್ರಶಸ್ತಿ ಗೌರವ

ಬಣಕಲ್ :ಮ್ಯಾನ್ ಕೈಂಡ್ ಟ್ರಸ್ಟ್ ಸಮಾಜದ ಪ್ರಗತಿಗೆ ಕೋಟ್ಯಾಂತರ ರೂಪಾಯಿಗಳನ್ನು ನೀಡುತ್ತಾ ಬಂದಿದ್ದು,ಅಸಹಾಯಕರ, ಬಡವರ, ಆರ್ಥಿಕ ದುರ್ಬಲರ ಪ್ರಗತಿಗೆ ಸದಾ ಶ್ರಮಿಸುತ್ತಾ ಬಂದಿದೆ,ಸಮಾಜದಲ್ಲಿ ತನ್ನ ಸೇವೆಯಿಂದ ಗುರುತಿಸಿಕೊಂಡಿದೆ. ಬಡವರ ಪಾಲಿಗೆ ಆಪದ್ಬಾಂಧವ ಸಂಸ್ಥೆಯಾಗಿ ಈಗ ಎಲ್ಲೆಡೆಯೂ ತನ್ನ ಚಾಪನ್ನು ಮೂಡಿಸುತ್ತಿದೆ.

ಇಂತ ಜನಪರ ಸಂಸ್ಥೆಯನ್ನು ಬಣಕಲ್ ಗೆ ಪರಿಚಯಿಸಿದ ಕೀರ್ತಿ ಬಣಕಲ್ ನ ಹೆಮ್ಮೆಯ ಸಮಾಜ ಸೇವಕರಾದ ಸಾಜಿದ್ ಅವರಿಗೆ ಸಲ್ಲುತ್ತದೆ.

ಹಲವಾರು ಜನಪರ ಕೆಲಸ ಮಾಡುತ್ತಿರುವ ಸಾಜಿದ್, ಯಾವುದೇ ಪ್ರಚಾರ ಪ್ರಶಸ್ತಿಗೆ ಅಸೆ ಪಡದೆ ತಮ್ಮಷ್ಟಕ್ಕೆ ತಾವು ಸೇವೆ ಮಾಡಿಕೊಂಡು ಸಮಾಜಕ್ಕೆ ನಿಜವಾಗಿ ಸೇವೆ ಸಲ್ಲಿಸುತ್ತಾ ನೀರ್ಗತಿಕರ ಪಾಲಿಗೆ ಆಪದ್ಬಾಂಧವರಾಗಿದ್ದಾರೆ.ಬಣಕಲ್ ನ ಶಾಂತಿನಗರದವರಾದ ಸಾಜಿದ್ ಅವರು ಜಾತಿ ಧರ್ಮ ಎಲ್ಲವನ್ನೂ ಬದಿಗೊತ್ತಿ ಜನ ಸೇವೆಯೇ ಜನಾರ್ದನ ಸೇವೆ ಎಂಬ ಕಲ್ಪನೆಯೊಂದಿಗೆ ಸಮಾಜ ಸೇವೆಯ ಮೂಲಕ ಜನ ಮನದಲ್ಲಿ ನೆಲೆಯೂರಿದ್ದಾರೆ. ಯಾರೇ ಆಗಲಿ ತೊಂದರೆಯಲ್ಲಿ ಸಿಲುಕಿದ್ದರೆ ತಕ್ಷಣ ಸ್ಪಂದಿಸಿ ಅವರ ಅವಶ್ಯಕತೆಗಳನ್ನು ಪೂರೈಸುವವರೆಗೂ ನಿದ್ರೆ ಮಾಡದ ಛಲದಂಕ ಮಲ್ಲರೆಂದರೂ ತಪ್ಪಾಗಲಾರದು. ಈಗ ಸಾಜಿದ್ ರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಮೂಡಬಿದ್ರೆ ಪಡು ಮೂರ್ನಾಡು ಪಾಂಚಜನ್ಯ ಸಭಾಂಗಣ ಬನ್ನಡ್ಕದಲ್ಲಿ ನಡೆದ ಸಮಾರಂಭದಲ್ಲಿ “ಶ್ರೇಷ್ಠ ಅಭಿಮಾನಿ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ .ಇವರ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ದೊರಕಿರುವುದು ನಿಜಕ್ಕೂ ಶ್ಲಾಘನೀಯ .

ಇದೆ ರೀತಿ ಅವರ ಸೇವೆ ಮುಂದುವರೆದು ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಬಣಕಲ್ ನ್ಯೂಸ್ ವತಿಯಿಂದ ಹಾರೈಸುತ್ತೇವೆ.

✍️ವರದಿ :ಸೂರಿ ಬಣಕಲ್