ಕೊಲೆ ಬೆದರಿಕೆ:ಆರೋಪಿ ಬಂಧನ,ವಾಮಾಚಾರ ಶಂಕೆ

ಪತಿಯೊಂದಿಗೆ ಬಿನ್ನಾಭಿಪ್ರಾಯದಿಂದ ಪತ್ನಿ ತವರು ಮನೆಗೆ ಬಂದಿದ್ದಳು , ಇದರಿಂದ ಕೋಪಗೊಂಡ ಪತಿ ಪತ್ನಿಯ ಮನೆಗೆ ಮಾಟ ಮಾಡಿಸಿರುವ ವಿಚಿತ್ರಕಾರಿ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕು ಮತ್ತಿಕಟ್ಟೆ ಗ್ರಾಮದಲ್ಲಿ ನಡೆದಿದೆ.ಮೂಡಿಗೆರೆ ತಾಲೂಕಿನ ಮರಗಣಸೆ ಗ್ರಾಮದ ಗುರುಮೂರ್ತಿ ಕಳೆದ 15ವರ್ಷಗಳ ಹಿಂದೆ ಸುಮಿತ್ರ ಎಂಬುವರನ್ನು ಮದುವೆಯಾಗಿದ್ದರು ಕೆಲವು ದಿನ ಯಾವುದೇ ಕಲಹ ಇಲ್ಲದೆ ಅಚ್ಚುಕಟ್ಟಾಗಿ ಸಾಗಿತ್ತು ನಂತರ ಯಾರ ಕಣ್ಣು ಬಿತ್ತೋ ಏನೋ ಗಂಡ ಹೆಂಡತಿ ನಡುವೆ ಜಗಳ ನಡೆಯಲು ಪ್ರಾರಂಭವಾಯಿತು . ಹಿರಿಯರು ಅನೇಕ ಬಾರೀ ರಾಜೀ ಪಂಚಾಯಿತಿ ಮಾಡಿದ್ದರೂ ಕೂಡ ಪ್ರಯೋಜನ ವಾಗಿಲ್ಲ.ಕೆಲವು ದಿನಗಳ ಹಿಂದೆ ಗಂಡ- ಹೆಂಡತಿ ಮಧ್ಯೆ ಮತ್ತೆ ಜಗಳ ತಾರಕಕ್ಕೆ ಹೋಗಿದ್ದ ಕಾರಣ ಸುಮಿತ್ರ ಅಣ್ಣನ ಮನೆ ಸೇರಿದ್ದಳು. ಇದರಿಂದ ಕೋಪಗೊಂಡ ಪತಿ ಕೊಲೆ ಬೆದರಿಕೆ ಹಾಕಿದ್ದನು.ಕೂಡಲೇ ಸತೀಶ್ ಬಾಗಿಲು ತೆರೆದು ಹೊರ ಬಂದಾಗ ಗುರುಮೂರ್ತಿ ಅಲ್ಲಿಂದ ಕಾಲ್ಕಿತ್ತನು. ಬೆಳಗಿನ ಜಾವಾ ನೋಡಿದಾಗ ರಕ್ತದ ಕಲೆ ಕಂಡಿತ್ತು. ಮೇಲ್ನೋಟಕ್ಕೆ ವಾಮಾಚಾರ ಮಾಡಿರುವುದು ಕಂಡು ಬಂದಿದೆ.

ಈ ಸಂಬಂಧ ಬಣಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.