ಬಣಕಲ್ ಪ್ರೌಢ ಶಾಲೆಯಲ್ಲಿ ಸಹ್ಯಾದ್ರಿವಾಹನ ಚಾಲಕರ ಮತ್ತು ಮಾಲೀಕರ ಸಂಘ, ಮತ್ತು ಬಣಕಲ್ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಸೇರಿ ಬಣಕಲ್ ಪ್ರೌಢ ಶಾಲಾ ಆವರಣವನ್ನು ಸ್ವಚ್ಚ ಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.ಶಾಲಾ ಸುತ್ತ ಮುತ್ತ ಬೆಳೆದಂತಹ ಗಿಡ ಗಂಟಿಗಳನ್ನು ಯಂತ್ರೋಪಕರಣದ ಮೂಲಕ ಸ್ವಚ್ಛ ಮಾಡಿದರು.ಅವರ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದ್ದಾರೆ.ವರದಿ ✍️ಸೂರಿ ಬಣಕಲ್
