ಮರೆತೆನೆಂದರೂ ಮರೆಯಲಾಗದ ಮಾಣಿಕ್ಯ ಬಣಕಲ್ ನ ಅಬ್ದುಲ್ ಖಾದರ್ ಬಣಕಲ್

:ಮರೆಯಾದರೂ ಮರೆಯಲಾಗದ ಮಾಣಿಕ್ಯ ಕಷ್ಟಕ್ಕೆ ಮಿಡಿಯೋಣ ಒಂದಾಗಿ ಬಾಳೋಣ ಅನ್ನುತ್ತಾ ಕಷ್ಟಕ್ಕೆ ಮಿಡಿದ ಹೃದಯವಂತನ ಬಗ್ಗೆ ಸಣ್ಣ ವರದಿಯಿದು. ಸಹಾಯ ಮಾಡುವ ಮನಸ್ಸಿದ್ದರೆ ಯಾವುದೇ ಜಾತಿ ಧರ್ಮ ಭಾಷೆ ನೆಲ ಜಲ ಅಡ್ಡಿಯಾಗದು ಎನ್ನುವುದಕ್ಕೆ ಅಬ್ದುಲ್ ಖಾದರ್ ಅವರೇ ಉತ್ತಮ ಉದಾಹರಣೆ.ಸೃಷ್ಟಿ, ಸ್ಥಿತಿ, ಲಯಗಳಿಂದ ಈ ಪ್ರಪಂಚ ಉಂಟಾಗಿದೆ. ಹುಟ್ಟಿದ ಮನುಷ್ಯ ನಿಗೆ ಸಾವು ತಪ್ಪದು. ಹುಟ್ಟು ಆಕಸ್ಮಿಕ, ಸಾವು ನಿಚ್ಚಿತ. ಇದಕ್ಕೆ ಎರಡು ಮಾತಿಲ್ಲ. ಹುಟ್ಟಿದ ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದು ಮುಖ್ಯವಲ್ಲ. ಇದ್ದಷ್ಟು ಸಮಯ ಏನನ್ನು ಸಾಧಿಸಿದ ಎಂಬುದು ಮುಖ್ಯ.
ಬಣಕಲ್ ಪಟ್ಟಣದಲ್ಲಿ ಕಳೆದ 50ವರ್ಷಗಳಿಂದ ವ್ಯಾಪಾರ ವಹಿವಾಟು ಮಾಡುತ್ತಿದ್ದ ಜನರ ಪಾಲಿಗೆ ಆಪತ್ಬಾಂಧವರಾಗಿದ್ದ ವ್ಯಕ್ತಿಯ ಪರಿಚಯ ಇವತ್ತಿನ ನಮ್ಮ ಪತ್ರಿಕೆಯಿಂದ ಮಾಡ ಹೊರಟಿದ್ದೇವೆ. ಬಣಕಲ್ ನಲ್ಲಿ ಕಾದ್ರಿಕಾಕಾ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಿರಪರೀತ ಹೆಸರು. ವ್ಯಕ್ತಿ ಜೀವಂತ ಇಲ್ಲದಿದ್ದರೂ ಅವರ ಹೆಸರು ಜೀವಂತವಾಗಿದೆ.ಇವರು ಮೂಲತಃ ಬಿ.ಸಿ. ರೋಡ್ ತಲಪಾಡಿಯವರು,ಖಾದರ್ ಅವರಿಗೆ 5ಜನ ಮಕ್ಕಳು3ಗಂಡು 2ಹೆಣ್ಣು.. ಬಡಕುಟುಂಬದಲ್ಲಿ ಜನಿಸಿದ ಅವರು ಬಣಕಲ್ ನಲ್ಲಿ ಡ್ರೈವರ್ ಕೆಲಸ ಹಾಗೂ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದರು. ನಂತರ ಬಣಕಲ್ ನಲ್ಲಿ ದಿನಸಿ ವ್ಯಾಪಾರ ಮಾಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಪ್ರಾರಂಭಗೊಂಡ ಅವರ ವ್ಯಾಪಾರ ನಂತರದ ದಿನಗಳಲ್ಲಿ ಬಣಕಲ್ ಗ್ರಾಮದ ಸುತ್ತ ಮುತ್ತಲಿನ ಅಂಗಡಿಗಳಿಗೆ ಹೋಲ್ ಸೆಲ್ ದರದಲ್ಲಿ ದಿನಸಿ ಕೊಡಲು ಪ್ರಾರಂಭಿಸುತ್ತಾರೆ ತನ್ನ ವ್ಯವಹಾರವನ್ನು ವೃದ್ಧಿಸಿಕೊಳ್ಳುತ್ತಾರೆ ನಂತರದ ದಿನದಲ್ಲಿ ಜಿಲ್ಲೆಯಲ್ಲೇ ಜೇನಿತ್ ಸ್ಟೋರ್ ಪ್ರಖ್ಯಾತಿ ಪಡೆಯಿತು.ಬಣಕಲ್ ನಲ್ಲಿ ‘ದೊಡ್ಡ ಅಂಗಡಿ’ ಎಂಬ ಶ್ರೇಯ ಅವರಿಗೆ ಸಲ್ಲಿತು. ಜೇನಿತ್ ಸ್ಟೋರ್ ಎಂಬ ಹೆಸರು ಇದ್ದರು ಬಣಕಲ್ ಗ್ರಾಮದಲ್ಲಿ ದೊಡ್ಡ ಅಂಗಡಿ ಎಂದೇ ಪ್ರಸಿದ್ದಿ ಪಡೆದಿದೆ ..ವಹಿವಾಟು ಬೆಳೆದಂತೆ ಅವರ ಹೃದಯ ವೈಶಾಲ್ಯತೆ ಕೂಡ ವೃದ್ಧಿಸುತ್ತ ಹೋಯಿತು.ಯಾರೇ ಕಷ್ಟ ಎಂದು ಬಂದರೆ ಕೈ ತುಂಬಾ ನೀಡಿ ಕಳಿಸುತಿದ್ದರು. ಯಾವುದೇ ಕಾರಣಕ್ಕೂ ಪ್ರಚಾರ ಬಯಸುತ್ತಿರಲಿಲ್ಲ.ಎಷ್ಟೋ ಬಡವರ ಪಾಲಿಗೆ ಆರಾಧ್ಯ ದೈವರಾಗಿದ್ದರು.ಮದುವೆ ಮುಂಜಿ ಇನ್ನಿತರ ಕಾರ್ಯಕ್ರಮಗಳಿಗೆ ತನ್ನ ಕೈಲಾದ ಸೇವೆ ಮಾಡುತಿದ್ದರು ಯಾರೊಂದಿಗೂ ಶತ್ರುತ್ವ ಬೆಳೆಸಿಕೊಳ್ಳದೆ ಆತ್ಮೀಯರಾಗಿ ಬದುಕಿದರು .ಅವರು ನಮ್ಮನ್ನಗಲಿ ಇಂದಿಗೆ 10ವರ್ಷ ಕಳೆದಿವೆ ಆದರೆ ಅವರು ಮಾಡಿದ ಸೇವೆ ಇಂದಿಗೂ ಜೀವಂತ.ಜಾತಿ ಬೇದ ತೋರಿಸದೆ ಅವರು ಎಷ್ಟೋ ಕಡುಬಡವರಿಗೆ ಅನ್ನ ಹಾಕಿದ್ದಾರೆ ಹಲವಾರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ತನ್ನ ಬಳಿಗೆ ಬರುವ ಎಷ್ಟೋ ನಿರ್ಗತಿಕರಿಗೆ ತನ್ನಲ್ಲಾದ ಸಹಾಯ ಹಸ್ತವನ್ನು ಚಾಚಿದ್ದಾರೆ. ಈಗಲೂ ಅವರನ್ನು ನೆನೆಯದ ಜನರಿಲ್ಲ. ಅದೇ ರೀತಿ ಬಡವರ ಪಾಲಿನ ದೈವ ಎಂದರೆ ತಪ್ಪಾಗಲಾರದು.
ಹೃದಯವಂತ, ಬತ್ತದ ಜೀವನ ಪ್ರೀತಿ, ಗಂಡೆದೆಯವ, ಸ್ನೇಹಪರ, ಕಾಳಜಿ, ಔದಾರ್ಯ ಮೂರ್ತಿ, ಕೊಡುಗೈ ದಾನಿ, ಇವೆಲ್ಲಾ ಕಾದರ್ ಅಣ್ಣನವರ ವ್ಯಕ್ತಿತ್ವಸೂಚಕಗಳು. ಅವರು ಬಣಕಲ್ ನವರು ಎಂದುಕೊಳ್ಳುವುದೇ ಬಹು ಹೆಮ್ಮೆಯ ವಿಷಯ’
ಹಲವು ದೀಪಗಳನ್ನು ಹಚ್ಚಿ ಅವುಗಳ ಪ್ರತಿಭೆಯಲ್ಲಿ ತಾನು ಹಿಂದೆ ನಿಂತ ದೀಪ ಅವರು . ಇಂತಹ ವ್ಯಕ್ತಿತ್ವ ಇರುವುದರಿಂದಲೇ ಎಷ್ಟೋ ದಶಕಗಳ ನಂತರವೂ ಅವರನ್ನು ಪ್ರೀತಿಯಿಂದ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ ಜನರು.
ದೈಹಿಕವಾಗಿ, ಮಾನಸಿಕವಾಗಿ ಎತ್ತರದ ವ್ಯಕ್ತಿಯಾಗಿದ್ದ ಖಾದರ್ ಅವರನ್ನು ಸ್ಮರಿಸಿಕೊಳ್ಳುತ್ತಿದ್ದವರು, ಅವರನ್ನು ಕುರಿತು ಅತ್ಯಂತ ಗೌರವದಿಂದ ಅವರಂತಹ ಮನುಷ್ಯರೇ ವಿರಳ ಎನ್ನುವ ರೀತಿಯಲ್ಲಿಜನ ಮಾತನಾಡುತ್ತಾರೆ ಹೀಗೆ ತನ್ನ ಜೀವಿತಾವದಿಯಲ್ಲಿಜನಾನುರಾಗಿಯಾಗಿ ಬದುಕಿದ ನಿಸ್ಕಲ್ಮಷ ವ್ಯಕ್ತಿಯನ್ನು ಪತ್ರಿಕೆ ಸ್ಮರಿಸುತ್ತದೆ..