ಕ್ರಿಯಾಶೀಲರಾಗಿಸಲು ಕ್ರೀಡೆ ಆಯೋಜನೆ :ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷ ಮೇಲ್ವಿನ್ ಲಸ್ರಾದೋ

ಬಣಕಲ್ :ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದಿಂದ ಕ್ರೀಡಾಕೂಟವನ್ನು ಬಣಕಲ್ ನಜೇರತ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದರು. ಕ್ರೈಸ್ತ ಬಾಂದವರಿಗಾಗಿ ಆಯೋಜಿಸಿದ್ದ ಕ್ರೀಡೆಯಲ್ಲಿ ಮಕ್ಕಳು, ಯುವಕರು, ಹಿರಿಯರು ಎನ್ನದೆ ಎಲ್ಲಾ ವರ್ಗದ ವಯೋಮಾನದವರು ಭಾಗವಹಿಸಿ ಕ್ರೀಡೆಯನ್ನುಯಶಸ್ವಿಗೊಳಿಸಿದರು. ಕ್ರೈಸ್ತ ಸಂಘದ ಅಧ್ಯಕ್ಷರಾದ ಮೇಲ್ವಿನ್ ರವರು ಮಾತನಾಡಿ ಯುವಕರನ್ನು ಕ್ರೀಯಾಶೀಲರಾಗಿಸಲು ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.
ಗುರುಗಳಾದ ಲೋರನ್ಸ್ ತೋಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ಸ್ಫೂರ್ತಿ ತುಂಬುವ ಕ್ರೀಡಾಕೂಟಗಳಿಗೆ ಉತ್ತೇಜನ ನೀಡಬೇಕು. ಯುವಶಕ್ತಿಯನ್ನು ಸನ್ಮಾರ್ಗದಲ್ಲಿ ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿತ್ತು ಎಂದರು ಕಾರ್ಯಕ್ರಮದಲ್ಲಿ ಸಿಸ್ಟರ್ ಹಿಲ್ಡಹಾಗೂ ಬಣಕಲ್ ಕ್ರೈಸ್ತ ಬಾಂದವರು ಭಾಗವಹಿಸಿದ್ದರು.