ಕಾಫಿ ನಾಡಿನಲ್ಲಿ ಹುಲಿ ಹೆಜ್ಜೆ ಪತ್ತೆ, ಬೆಚ್ಚಿ ಬಿದ್ದ ಜನತೆ

ಬಣಕಲ್ :ಕಾಫಿನಾಡಿನ ಜನತೆ ಕ್ಷಣ ಕ್ಷಣಕ್ಕೂ ಕಂಗಾಲ್ ಆಗಿದ್ದಾರೆ. ಒಂದು ಕಡೆ ಆನೆ ದಾಳಿ ಇನ್ನೊಂದು ಕಡೆ ತೋಟಗಳಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತು ಇದರಿಂದ ಜನ ಕ್ಷಣ ಕ್ಷಣಕ್ಕೂ ಭಯ ಜೀವ ಭಯದಿಂದ ಕೆಲಸ ಮಾಡುವಂತಾಗಿದೆ .ಕಳೆದ ಎರಡು ದಿನಗಳಿಂದ ದಾಸರಹಳ್ಳಿ ಸಮೀಪದ ಮೋತಿ ಬನ ಎಸ್ಟೇಟ್ ನಲ್ಲಿ ಹುಲಿ ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ವಿನಯ್ ಎಂಬ ಕಾರ್ಮಿಕನ ಕಣ್ಣಿಗೆ ಹುಲಿ ಸಂಚರಿಸಿದ ಹೆಜ್ಜೆ ಗುರುತು ಕಂಡಿದೆ.ಇದರಿಂದ ಗಾಬರಿಗೊಂಡ ಅವರು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣಕ್ಕೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.ಇದು ಕಾಫಿನಾಡಿನ ಜನರನ್ನು ಮತ್ತಷ್ಟು ಬೆಚ್ಚಿ ಬೀಳಿಸಿದೆ. ಅದ್ರಲ್ಲೂ ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ, ಹೆಗ್ಗುಡ್ಲು,ದಾಸರಹಳ್ಳಿ ಕನ್ನಿಗೆರೆ ಸೇರಿ ವಿವಿಧ ಭಾಗದ ಹಳ್ಳಿಗಳ ಜನ ನಿದ್ದೆನೇ ಮಾಡ್ತಿಲ್ಲ. ಯಾಕಂದ್ರೆ, ಕಾಫಿ ತೋಟದಲ್ಲಿ ಹುಲಿಗಳು ಬೀಡು ಬಿಟ್ಟಿರುವುದು . ಆಗಾಗ ಓಡಾಡೋ ಹುಲಿ ಜಾನುವಾರುಗಳನ್ನು ಬಲಿಪಡೆಯುತ್ತಿವೆ. ಆದ್ರೆ, ಕಳೆದ ಕೆಲ ದಿನಗಳಿಂದ ಹುಲಿ ಕಾಟ ಮಿತಿಮೀರಿದ್ದು, ಜನ ಓಡಾಡೋದಕ್ಕೂ ಹೆದರುತ್ತಿದ್ದಾರೆ. ಸಂಜೆ ಆದ್ರೆ ಸಾಕು ಮನೆ ಬಿಟ್ಟು ಹೊರಗೇ ಬರದಂತಾಗಿದೆ. ಇದರಿಂದಾಗಿ ಜನ ಯಾವಾಗ ಏನಾಗುತ್ತೋ ಅನ್ನೋ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲಸಕ್ಕೂ ಕೂಲಿ ಕಾರ್ಮಿಕರು ಬರಲು ಭಯ ಪಡುತ್ತಿದ್ದಾರೆ . ಮಕ್ಕಳು ಶಾಲೆಗೆ ಹೋಗೋಕೂ ಭಯ ಪಡುವಂತಾಗಿದೆ.ಮುಂದೆ ದೊಡ್ಡ ಅನಾಹುತ ಆಗುವ ಮೊದಲು ಅರಣ್ಯಾಧಿಕಾರಿಗಳು ಹುಲಿ ಹಿಡಿಯುವ ಪ್ರಯತ್ನ ಮಾಡಬೇಕು ಅನ್ನೋದು ಕಾಫಿ ತೋಟದ ಮಾಲೀಕರು ಹಾಗೂ ಕಾರ್ಮಿಕರ ಒತ್ತಾಯ. ಒಟ್ಟಾರೆ, ಹುಲಿ ಹೆಜ್ಜೆ ಪತ್ತೆಯಾಗಿರೋದು ಮಲೆನಾಡಿಗರನ್ನ ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಜಾನುವಾರುಗಳ ಸಂಖ್ಯೆ ಕೂಡ ಕಡಿಮೆಯಾಗ್ತಿರೋದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.