ಬಣಕಲ್ :ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕುರಿತು ಬಣಕಲ್ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಇಮ್ರಾನ್ ರವರು ಬೇಸರ ವ್ಯಕ್ತಪಡಿಸಿದ್ದಾರೆ ಬೆಂಗಳೂರಿನ ಮುತ್ಯಾಲ ನಗರದ ನಿವಾಸದ ಎದುರು ದುಷ್ಕೃತ್ಯ ಸಂಭವಿಸಿದ್ದು ಹಲ್ಲೆಕೋರರು ದಾಳಿ ಮಾಡಿದ್ದಾರೆ ತಕ್ಷಣಕ್ಕೆ ಶಶಿಕುಮಾರ್ ತಮ್ಮ ಬಳಿ ಇದ್ದ ಪರವನಾಗಿ ಹೊಂದಿದ ಗನ್ ತೆಗೆದು ತೋರಿಸಿದರಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಸ್ವಲ್ಪದರಲ್ಲೇ ಪ್ರಾಣಾಪಯದಿಂದ ಪಾರಗಿದ್ದಾರೆ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಧನ್ಯವಾದ ತಿಳಿಸಿದರು ಆದಷ್ಟು ಬೇಗ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಆಗಬೇಕೆಂದು ಬಣಕಲ್ ರಿವರ್ ವ್ಯೂ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಇಮ್ರಾನ್ ಅಗ್ರಹಿಸಿದ್ದಾರೆ
