ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಸೋಮವಾರ ಬಣಕಲ್ ಕೊಟ್ಟಿಗೆಹಾರ ಬಂದ್ ಗೆ ತೀರ್ಮಾನ


ಬಣಕಲ್ :ರಾಜಸ್ಥಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ನಯಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಸೋಮವಾರ ಬಣಕಲ್, ಕೊಟ್ಟಿಗೆಹಾರ,ಸಬ್ಬೆನಹಳ್ಳಿ ಸಂಪೂರ್ಣ ಬಂದ್ ಮಾಡಲು ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಯಿತು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು, ಸೋಮವಾರದಂದು ಮೆಡಿಕಲ್,ಆಸ್ಪತ್ರೆ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಉಳಿದಂತೆ ಅಂದು ಬೇರೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ಇರುವುದಿಲ್ಲ ಸಂತೆ ವ್ಯಾಪಾರಕ್ಕೆ ಅವಕಾಶವಿರುದಿಲ್ಲ ದಯವಿಟ್ಟು ಎಲ್ಲರೂ ಸ್ವಯಂ ಪ್ರೇರಿತ ಬಂದ್ ಗೆ ಸಹಕರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು ಇಂದು ನಡೆದ ಸಭೆಗೆ ಬಣಕಲ್ ಕೊಟ್ಟಿಗೆಹಾರ ಭಾಗದ ಸಾರ್ವಜನಿಕರು ಆಟೋ ಚಾಲಕರು, ಹೋಟೆಲ್ ಮಾಲೀಕರು, ವರ್ತಕರು ಭಾಗವಹಿಸಿದ್ದರು.