ಕೈ ಯಲ್ಲಿ ಯಂತ್ರ ಹಿಡಿದು ಶಾಲಾ ಆವರಣವನ್ನುಸ್ವಚ್ಛ ಗೊಳಿಸಿದ ಮತ್ತಿಕಟ್ಟೆಶಾಲಾ ಮುಖ್ಯ ಶಿಕ್ಷಕ ಪೂರ್ಣೇಶ್

ಬಣಕಲ್ :ಸರಕಾರಿ ಶಾಲೆಗಳು ಹಾಗೂ ಸರ್ಕಾರಿ ಶಿಕ್ಷಕರ ಬಗ್ಗೆ ಇಂದಿನ ದಿನಗಳಲ್ಲಿ ತಾತ್ಸಾರ ಮನೋಭಾವ ಇದೆ, ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಭಾವನೆ ಕೂಡ ಇದೆ ಆದರೆ ಸರ್ಕಾರಿ ಶಾಲೆಯಲ್ಲೂ ಕೂಡ ಉತ್ತಮ ಬೋಧನೆ ಉತ್ತಮ ಶಿಕ್ಷಕರು ಇದ್ದಾರೆ ಎಂಬುದನ್ನು ಮತಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕರಾದ ಪೂರ್ಣೇಶ್ ಎಂಬುವವರು ತೋರಿಸಿದ್ದಾರೆ .
ಮತ್ತಿಕಟ್ಟೆ ಗ್ರಾಮದಲ್ಲಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ,ಹೆಚ್ಚಾಗಿ ಶಾಲೆಗೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಬಡ ಮಕ್ಕಳೇ ವ್ಯಾಸಂಗ ಮಾಡಿತ್ತಿದ್ದಾರೆ ಈ ಶಾಲೆಗೆ ಪೂರ್ಣೇಶ್ ಎಂಬ ಮುಖ್ಯ ಶಿಕ್ಷಕ ಬಂದ ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ ಮಕ್ಕಳಿಗೆ ಉತ್ತಮ ಬೋಧನೆ ಶಾಲಾ ಸ್ವಚ್ಛತೆ ಬಗ್ಗೆ ಮುತುವರ್ಜಿ, ಮಕಳಿಗೆ ಆಟ ಪಾಠಗಳಲ್ಲಿ ತೊಡಗಳು ಉತ್ತಮ ವಾತಾವರಣ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ತಾನೇ ಶ್ರಮ ವಹಿಸಿ ಪೋಷಕರಿಗೆ ಸರ್ಕಾರಿ ಶಾಲೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಿ ಮಕಳನ್ನು ಶಾಲೆಗೆ ಬರುವಂತೆ ಮಾಡುವಲ್ಲಿ ಯಶಸ್ವಿಗಿದ್ದಾರೆ, ಕಳೆದ ಒಂದು ತಿಂಗಳು ಸರ್ಕಾರಿ ರಜೆ ಇದ್ದ ಕಾರಣ ಶಾಲಾ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಕಾಡಿನ ರೀತಿ ಬೆಳೆದಿತ್ತು,ಶಾಲೆ ಪ್ರಾರಂಭಗೊಂಡು ಮಕ್ಕಳು ಶಾಲೆಯ ಕಡೆ ಹೆಜ್ಜೆ ಇಡುತ್ತಿರುವುದರಿಂದ ಶಾಲೆಯ ಸುತ್ತ ಮುತ್ತ ವಿಷ ಜಂತುಗಳು ಸೇರಿಕೊಂಡರೆ ಮಕ್ಕಳಿಗೆ ಅಪಾಯ ಎಂಬುದನ್ನು ಮನಗಂಡ ಮುಖ್ಯ ಶಿಕ್ಷಕ ಪೂರ್ಣೇಶ್ ಯಾರನ್ನು ಕಾಯದೆ ತಾನೇ ಕೈಯಲ್ಲಿ ಯಂತ್ರ ಹಿಡಿದು ಸಹ ಶಿಕ್ಷಕ ರಘು ರವರೊಂದಿಗೆ ಶಾಲಾ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು,ಸರ್ಕಾರಿ ಶಾಲೆಗಳು ಸ್ವಚ್ಚ ವಾಗಿರುವಂತೆ ಮಾಡಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸ್ಥಳೀಯ ನಿವಾಸಿಗಳ ಸಹಕಾರ ಅಗತ್ಯ ಎಂದರು ,ಸರಕಾರಿ ಶಾಲೆಗಳು ಸಾರ್ವಜನಿಕರ ಆಸ್ತಿ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಶಾಲೆಯ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಶಾಲಾ ಆವರಣದಲ್ಲಿ ಕಸ ಕಡ್ಡಿ ಹಾಕದಂತೆ ತಡೆಯುವ ಕಾರ್ಯ ಮಾಡಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಗೆ ಪೂರಕ ಪರಿಸರ ಕಲ್ಪಿಸುವ ಕರ್ತವ್ಯ ಕೇವಲ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷ ಕದ್ದು ಎಂಬ ಭಾವನೆಯನ್ನು ತೊಡೆದು ಹಾಕಬೇಕಿದೆ ಎಂದರು,