ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಪುನೀತ್ ಹುಟ್ಟುಹಬ್ಬ ಆಚರಣೆ

ಮೂಡಿಗೆರೆ :ಕರ್ನಾಟಕ ರತ್ನ,ಪವರ ಸ್ಟಾರ್ ದಿ ಪುನೀತ್ ರಾಜ್ ಕುಮಾರ್ ಅವರ 47 ನೇ ವರ್ಷದ ಹುಟ್ಟು ಹಬ್ಬವನ್ನು ಮೂಡಿಗೆರೆ ತಾಲೂಕಿನ ಸುಂಕಸಾಲೆ ಮತ್ತು ದುರ್ಗದಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಳೂರು ಹೋಬಳಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಯುವ ಮೋರ್ಚಾ ಅಧ್ಯಕ್ಷ ಅಜಿತ್ ದುರ್ಗದಹಳ್ಳಿ ಕನ್ನಡಿಗರ ಪಾಲಿಗೆ ಪುನಿತ್ಎಂದಿಗೂ ಅಜರಾಮರವಾಗಲಿದ್ದಾರೆ ಅವರಿಗೆ ಕರ್ನಾಟಕ ರತ್ನ ಅರ್ಹವಾಗಿ ಸಂದಿದೆ ಎಂದರು
ತಾಲೂಕು ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ ಮಾತನಾಡಿ ಪುನೀತ್ ನಟನಾಗಿ ಮಾತ್ರವಲ್ಲದೆ ಬಡವರಿಗೆ ಮತ್ತು ಚಿತ್ರರಂಗದವರಿಗೆ ಹಾಗೂ ಜನ ಸಾಮನ್ಯರಿಗೆ ಗೊತ್ತಿಲ್ಲದ ರೀತಿಯಲ್ಲಿ ಸಹಾಯ ಮಾಡುವ ಮೂಲಕ ನಿಜವಾದ ಹೀರೋ ಎನಿಸಿದ್ದಾರೆ ಅವರಿಗೆ ಕೂಡಲೇಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಬೇಕು ಎಂದರು ಈ ಸಂದರ್ಭದಲ್ಲಿ ಆದೇಶ್ ದುರ್ಗದಹಳ್ಳಿ, ಸತ್ಯಂದ್ರ ಮುಂತಾದವರಿದ್ದರು