ಬಣಕಲ್ :ತಾಲ್ಲೂಕ್ಕಿನ ಬಣಕಲ್ ವಿಲೇಜ್ ಗ್ರಾಮದ ಆರಾಧ್ಯ ದೈವ ಶ್ರೀ ಕಲ್ಲನಾಥೆಶ್ವರ ಜಾತ್ರೆ ನಿಮಿತ್ತ ಗುರುವಾರ ಸಂಜೆ ಮಹಾ ರಥೋತ್ಸವ ಅದ್ದೂರಿಯಿಂದ ಜರುಗಿತು. ಕಲ್ಲನಾಥೆಶ್ವರ ದೇಗುಲದ ಐತಿಹಾಸಿಕ ಜಾತ್ರಾ ಮಹೋತ್ಸವ ಪುಷ್ಪಾಲಂಕೃತ ಗೊಂಡಿದ್ದ ರಥದಲ್ಲಿ ಸ್ವಾಮಿಯ ಮೂರ್ತಿನ್ನು ದೇವಸ್ಥಾನ ಅವರಣದ ಸುತ್ತ ಮೆರವಣಿಗೆ ಮೂಲಕ ಸದ್ಭಕ್ತರ ಹರ್ಷೋದ್ಘಾರ ಮಧ್ಯೆ ಸಂಭ್ರಮದಿಂದ ನಡೆಯಿತು
ಸ್ವಾಮಿಯನ್ನು ಹೊತ್ತ ರಥಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಸಮೂಹ ಹರಹರ ಮಹಾದೇವ ಎಂದು ಜಯಘೋಷ ಹಾಕುತ್ತಾ ಭಜನೆ, ಡೊಳ್ಳು, ಸಂಗೀತ ವಾದ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.
ಮೆರವಣಿಗೆ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಬಾವ ಮರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ನೆರವೇರಿಸಿ ಕೃತಾರ್ಥರಾದರು.
ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕಲ್ಲನಾಥೆಶ್ವರ ಸ್ವಾಮಿಯ ವಿಶೇಷ ಅಲಂಕಾರಿಕ ಪೂಜೆ, , ಧಾರ್ಮಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲೆಯ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು
