:ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆ ಯ ಜೆಸಿರೇಟ್ ನೇತೃತ್ವದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಬಣಕಲ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಅಧ್ಯಕ್ಷರಾದ ಅಶ್ವಿನಿ ಶರತ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಮತಿ ಅನುಪಮಾ ರವಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಗ್ಗಲಮಕ್ಕಿ ಗಣೇಶ್, ಸಂಸ್ಥೆಯ ಅಧ್ಯಕ್ಷ ಶರತ್ ಪಲ್ಗುಣಿ, ನಿಕಟಪೂರ್ವ ಅಧ್ಯಕ್ಷರಾದ ಡಿ ಟಿ ನವೀನ್, ಜೇಸಿರೇಟ್ ಪೂರ್ವ ಅಧ್ಯಕ್ಷರಾದ ಸೌಮ್ಯ ಶೆಟ್ಟಿ, ಮಧುರ ಕವೀಶ್, ಕಾರ್ಯದರ್ಶಿ ನಾಟ್ಯ ರಂಜಿತ್, ಕಾರ್ಯಕ್ರಮ ನಿರ್ದೇಶಕಿ ಶಬರಿ ಶ್ರೀನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಗಳಾದ ಅನುಪಮಾ ರವಿ ದಂಪತಿಗಳಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
