ಕೆಂಪೇಗೌಡ ಒಕ್ಕಲಿಗರ ವೇದಿಕೆ ಬಣಕಲ್ ಹೋಬಳಿ ನೂತನ ಅಧ್ಯಕ್ಷರಾಗಿ ಹೊಸಳ್ಳಿ ಚಂದನ್ ಗೌಡ ಆಯ್ಕೆ

ಬಣಕಲ್: ಇತ್ತೀಚೆಗೆ ಅಷ್ಟೇ ಮೂಡಿಗೆರೆ ತಾಲ್ಲೂಕು ಕೆಂಪೇಗೌಡ ಒಕ್ಕಲಿಗ ವೇದಿಕೆಯು ನೋಂದವಣೆಗೊಂಡಿದ್ದು ಅದರ ಬೆನಲ್ಲೇ ನಿನ್ನೆ ನಡೆದ ಸಭೆಯಲ್ಲಿ ಕೆಂಪೇಗೌಡ ಒಕ್ಕಲಿಗ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕಡಿದಾಳ್ ಬ್ರಿಜೇಶ್ ಅವರ ನೇತೃತ್ವದಲ್ಲಿ ಬಣಕಲ್ ಹೋಬಳಿ ಹಾಗೂ ಬಾಳುರು ಹೋಬಳಿಯಾ ಹೊಸ ಘಟಕ ಆರಂಭಿಸಿ ಬಣಕಲ್ ಹೋಬಳಿಯ ನೂತನ ಅಧ್ಯಕ್ಷರಾಗಿ ಹೊಸಳ್ಳಿಯಾ ಚಂದನ್ ಗೌಡ ಹಾಗೂ ಬಾಳುರು ಹೋಬಳಿಯ ಅಧ್ಯಕ್ಷರಾಗಿ ಮರ್ಕಲ್ ಸೋಮೇಶ್ ಗೌಡ ಇವರನ್ನು ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಬಿ ಎಂ ಭರತ್, ವಿಕ್ರಂ, ಯತೀಶ್, ರವಿಶಂಕರ್, ವಿನಯ್, ರಮೇಶ್, ಅನುಕುಮಾರ್,ಆದರ್ಶ್,ಲೋಹಿತ್ ,ರಕ್ಷಿತ್,ಸಾಗರ್, ಸತೀಶ್, ಉತ್ತಮ್, ಸುಬ್ಬು, ಮಿಥುನ್, ನೂತನ್, ಸುಂದ್ರೇಶ್, ಕವಿಶ್, ಶರತ್,ರಂಜಿತ್, ಭಗತ್, ಅಖಿಲ್, ಪ್ರವೀಣ್, ಗೌತಮ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.