ಭಾರತ್ ಬಂದ್ ಗೆ ಬಣಕಲ್ ವರ್ತಕರಿಂದ ವಿರೋಧ

ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಗೆ ಬಣಕಲ್ ನ ವರ್ತಕರಿಂದ ವಿರೋಧ ವ್ಯಕ್ತವಾಗಿದೆ,ಕೋವಿಡ್ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ ಹಳಿ ತಪ್ಪಿದ್ದ ಜೀವನ ನಿರ್ವಹಣೆ ಈಗಷ್ಟೇ ಒಂದು ಹಂತಕ್ಕೆ ಬರುತ್ತಿದೆ ಈ ಸಂದರ್ಭದಲ್ಲಿ ಮತ್ತೆ ಬಂದ್ ಮಾಡಿದರೆ ಜೀವನ ನಿರ್ವಹಣೆ ಕಷ್ಟ ವಾಗಲಿದೆ ಅದರಲ್ಲೂ ನಾಳೆ ಸೋಮಾವಾರ ಸಂತೆಯ ದಿನವಾಗಿರುವುದರಿಂದ ಸಂತೆಯ ವ್ಯಾಪಾರವನ್ನೇ ನೆಚ್ಚಿಕೊಂಡಿರುತ್ತೇವೆ ಅಂಗಡಿ ಬಂದ್ ಆದರೆ ನಮ್ಮಂತಹ ವರ್ತಕರಿಗೆ ತೊಂದರೆ ಆಗಲಿದೆ ಹಾಗೆ ಜನರಿಗೂ ಸಮಸ್ಯೆಗಳಾಗಬಾರದು ಎಂಬುದು ವರ್ತಕರ ಕಾಳಜಿ ಆಗಿದೆ ಎಂದು ವರ್ತಕರೊಬ್ಬರು ಅಳಲು ತೋಡಿಕೊಂಡರು, ಭಾರತ್ ಬಂದ್’ಗೆ ಬಣಕಲ್ ನ ಅಂಗಡಿಯ ಮಾಲೀಕರು ಇಂದು ಬಣಕಲ್ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಹಮ್ಮದ್ ಅಲಿ,ಗುಡ್ಡು, ಅರುಣ್ ಪೂಜಾರಿ,ಲತೀಫ್ ಯೋಗೇಶ್, ಸೂರಿ,ಇದ್ದರು.