ಮಲೆ ನಾಡಿನ ಬಣಕಲ್ ಬಾಳೂರು ಹೊರಟ್ಟಿಯ ಬಡ ಪ್ರತಿಭೆ ಹರೀಶ್ ರಿಂದ ಮನೆಯ ಮುಂದೆ ಮ್ಯೂಸಿಯಂ ಸೃಷ್ಟಿ

ಬಣಕಲ್ ಸಮೀಪದ ಬಾಳೂರು ಹೊರಟ್ಟಿ ಎಂಬ ಗ್ರಾಮದಲ್ಲಿ ಎಲೆ ಮರೆ ಕಾಯಿಯಂತೆ ಇರುವ ಸಣ್ಣ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಹರೀಶ್ ಎಂಬುವವರು ತನ್ನ ಮನೆಯ ಮುಂದಿನ ಖಾಲಿ ವರಾಂಡದಲ್ಲಿ ಹೂವು ಕಾಡುಪ್ರಾಣಿಗಳನ್ನು ಹೋಲುವ ಅಕೃತಿ ಹಸಿರು ಹುಲ್ಲಿನ ಮಿನಿ ಬೃಂದಾವನ ನಿರ್ಮಿಸಿದ್ದಾರೆ ಮಲೆನಾಡಿನ ಹುಡುಗನ ಕೈ ಚಳಕ ಎಂತವರಿಗೂ ಬೆರಗಾಗುವಂತಿದೆ ಬಿಡುವಿನ ಸಮಯದಲ್ಲಿ ಮನೆಯ ಮುಂಭಾಗದಲ್ಲಿ ಕೆಆರ್ ಎಸ್ ನ ಮರು ಸೃಷ್ಟಿಸಿದ್ದಾರೆ ಮನೆಯ ಎದುರಿನ ವರಾಂಡದಲ್ಲಿ ನೈಜ ಪ್ರಾಣಿಗಳನ್ನು ಹೋಲುವ ಪ್ರಾಣಿ ಪಕ್ಷಿಗಳ ಕೆತ್ತನೆ ಮಾಡಿದ್ದಾರೆ ಹಾಗೆ ಸುತ್ತಲೂ ಹೂವಿನಗಿಡಗಳ ನಿರ್ಮಾಣ ಹಸಿರು ಹುಲ್ಲು ಹಾಸಿಗೆ ಮದ್ಯದಲ್ಲಿ ನೀರಿನ ಬುಗ್ಗೆ ಇದನ್ನು ನೋಡಿದರೆ ಒಮ್ಮೆ ಮೈಸೂರು ಕೆ ಆರ್ ಎಸ್ ಗೆ ಹೋಗಿ ಬಂದ ಅನುಭವ ಆಗುವುದರಲ್ಲಿ ಅನುಮಾನವೇ ಇಲ್ಲ ನಿಜಕ್ಕೂ ಹರೀಶ್ ರವರ ಪ್ರತಿಭೆಯನ್ನು ಕಂಡು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮನೆಯ ಅಕ್ಕಪಕ್ಕದಲ್ಲೇ ಸಿಗುವ ಬೆಂಡಿನಿಂದ ಹೂವು, ಮಾಲೆ ತಯಾರಿಸುತ್ತಾರೆ. ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ.ಮನೆಯಲ್ಲಿರುವ ಮರದ ತುಂಡು ಕಬ್ಬಿಣ ಹಾಗೂ ವಿವಿಧ ಸಲಕರಣೆಗಳನ್ನು ಸಂಗ್ರಹಿಸಿ ಅದರಿಂದ ಪ್ರಾಣಿಗಳ ಪಕ್ಷಿಗಳ ಹಾಗೆ ರೂಪ ಕೊಟ್ಟು ಅದಕ್ಕೆ ಜೀವ ತುಂಬಿದ್ದಾರೆ ಅದು ನೋಡುಗರನ್ನು ಚಕಿತಗೊಳಿಸುತ್ತಿದೆ ನೀರಿನ ತೊಟ್ಟಿ ನಿರ್ಮಿಸಿ ಅದರಿಂದ ನೀರಿನ ಕಾರಂಜಿ ಸೃಷ್ಟಿ ಮಾಡಿದ್ದಾರೆ ನೀರು ಚಿಮ್ಮವಾಗ ಬಣ್ಣ ಬಣ್ಣದ ಲೈಟ್ ಗಳ ಅಲಂಕಾರ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಿದೆ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಹರೀಶ್ ರವರು ಬಿಡುವಿನ ಸಮಯದಲ್ಲಿ ಅವರು ಮಾಡಿದ ಈ ರೀತಿಯ ವಿಭಿನ್ನ ಪ್ರಯೋಗವನ್ನು ಎಲ್ಲರೂ ಮೆಚ್ಚಿದ್ದಾರೆ ಅವರು ನಿರ್ಮಿಸಿದ ಮಿನಿ ಬೃಂದಾವನವನ್ನು ಕಣ್ಣಾರೆ ಕಂಡು ಕಣ್ಣು ತುಂಬಿಸಿಕೊಳ್ಳಲು ಅಕ್ಕ ಪಕ್ಕದ ಗ್ರಾಮದಿಂದ ಅವರ ಸ್ನೇಹಿತರು ಹಿತೈಷಿಗಳು ಬರುತಿದ್ದಾರೆ ಹಾಗೆ ತಮ್ಮ ಮನೆಯಲ್ಲೂ ನಿರ್ಮಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ ಹಳ್ಳಿ ಪ್ರತಿಭೆಗಳು ತಾವು ಯಾರಿಗೂ ಏನು ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸುತಿದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸಿಸುವ ಕೆಲಸ ನಮ್ಮಿಂದ ಆಗಬೇಕಿದೆ.