ಕಾಡು ಹಂದಿ ದಾಳಿ, ಗಂಭೀರ ಗಾಯ

ಚಿಕ್ಕಮಗಳೂರು:
ನಿಡುವಾಳೆ– ಕಾಡುಹಂದಿ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಬಾಳುರು ಹೋಬಳಿಯ ಕೂವೆ ಗ್ರಾಮದ ಬಳಿ ನಡೆದಿದೆ.
ರಾಜಶೇಖರ್(75 ವರ್ಷ) ದಾಳಿಗೊಳಗಾದ ವ್ಯಕ್ತಿ.
ತೋಟದಲ್ಲಿ ಕೆಲಸ ಮಾಡುವ ವೇಳೆ ಘಟನೆ ನಡೆದಿದೆ. ತಲೇ, ಎದೆ, ಸೊಂಟ ಮತ್ತು ಕೈ, ಕಾಲುಗಳಿಗೆ ಗುದ್ದಿದೆ. ಗಾಯಾಳುವಿಗೆ ಸ್ಥಳೀಯ ಸರಕಾರಿ ನಿಡುವಾಳೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಹೋಬಳಿಯ ಕೂವೆ ಗ್ರಾಮ.