ಪೂರ್ಣ ಚಂದ್ರ ತೇಜಸ್ವಿ ಯುವ ಜನತೆಗೆ ಆದರ್ಶ ಆಗಬೇಕು ಎಂದು ಅನಿತಾ ಜಗದೀಪ್ ಅಭಿಪ್ರಾಯ ಪಟ್ಟಿದ್ದಾರೆ ಅವರು .ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ಇಂದು ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೋಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅನಿತಾ ಜಗದೀಪ್ ಉದ್ಘಾಟಿಸಿ ತೇಜಸ್ವಿ ಅವರು ನಮ್ಮ ಪರಿಸರದ ಬಗ್ಗೆ ನೈಜ ಘಟನೆಗಳಿಗೆ ಅಕ್ಷರ ರೂಪ ಕೂಟ್ಟವರು ಅವರು ಯುವ ಜನತೆಗೆ ಆದರ್ಶ ಆಗಬೇಕು ಎಂದು ನುಡಿದರು.
ನಿಕಟ ಪೂರ್ವ ಅಧ್ಯಕ್ಷರಾದ ಶಾಂತಕುಮಾರ್ ತೆಜಸ್ವಿ ಅವರ ಬಗ್ಗೆ ಉಪನ್ಯಾಸ ನೀಡಿ ತೇಜಸ್ವಿ ಅವರು ಕಾದಂಬರಿ,ಕಥಾ ಸಂಕಲನ,ಪ್ರಬಂಧ ಮತ್ತು ಅನುವಾದ ಸೆರಿದಂತೆ ಅನೇಕ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಕರ್ವಾಲೊ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಕಾಡು ಮತ್ತು ಕ್ರೌರ್ಯ, ಅಬಚೂರಿನ ಪೋಸ್ಟ್ ಆಫೀಸು, ತಬರನ ಕಥೆ, ಕಿರುಗೂರಿನ ಗಯ್ಯಾಳಿಗಳು,ನಮ್ಮ ಮಲೆನಾಡಿನ ವಿಸ್ಮಯದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಯುವ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ನುಡಿದರು ತೆಜಸ್ವಿ ಅವರು ಒಡನಾಡಿಗಳಾದ ಬಿ.ಆರ್.ಯತೀಶ್ ಗೌಡ್ರು ಅವರ ಜೊತೆಗಿನ ಒಡನಾಟದ ಬಗ್ಗೆ ತಿಳಿಸಿ ಕೂಟ್ಟರು ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಂಗಾರ ಚೆಲುವಯ್ಯ, ನವಿನ್.ಬಿ.ಆರ್, ಜ್ಯೋತಿ ಮುಖ್ಯ ಶಿಕ್ಷಕರು, ಪ್ರಕಾಶ್ ಬಕ್ಕಿ ವರದಿಗಾರರು,ಬಿ.ಎ.ಯತೀಶ್, ಸರ್ವೇಶ್ ಹಳಿಕೆ, ನವಿನ್ ಆನೆದಿಬ್ಬ, ರುದ್ರೇಶ್.ಬಿ.ಎಸ್,
ಸುಪ್ರೀತ್, ರಾಮಚಂದ್ರ ಮುಂತಾದವರು ಇದ್ದರು
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪೂರ್ಣ ಚಂದ್ರ ತೇಜಸ್ವಿಯವರ ಭಾವ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ