ಗಂಗಮೂಲ ರಸ್ತೆಯ ಗುಂಡಿ ಮುಚ್ಚಿದ ಭಗತ್ ಸಿಂಗ್ ನಗರದ ಯುವಕರು

ಚಿಕ್ಕಮಗಳೂರು:ಗುಂಡಿಗಳ ತಾಣ, ಸವಾರರು ಹೈರಾಣ.

ಕೊಟ್ಟಿಗೆಹಾರ – ಬಾಳೆಹೊನ್ನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ: ರಸ್ತೆ ಗುಂಡಿ ಮುಚ್ಚಿದ ನಿಡುವಾಳೆ ಗ್ರಾಮಸ್ಥರು ನಿಡುವಾಳೆಯ ಮಲ್ಲಿಗೆ ತೋಟ ಸಮೀಪ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿದ್ದು , ಅಪಘಾತ ಕ್ಕೆ ಕಟ್ಟಿಟ್ಟ ಬುತ್ತಿ . ನಿಡುವಾಳೆ ಗ್ರಾಮಸ್ಥರು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಈ ಹೊಂಡಗಳನ್ನು ಮುಚ್ಚುವ ಮೂಲಕ ಮಾದರಿಯಾದರಲ್ಲದೇ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಎಚ್ಚರಿಸುವ ಕಾರ್ಯ ಮಾಡಿದ್ದಾರೆ.

ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ಸಂತೋಷ್ ಸಾಲಿಯಾನ್, ಚಂದ್ರಶೇಖರ್, ಉಪ್ಪಿನವೀನ್,ಪ್ರದೀಪ್, ನಿರಂಜನ್, ಪೂರ್ಣೆಶ್, ಲೋಕಯ್ಯ, ನಿರಂಜನ್,ಶ್ರೀಜೇಶ್,ಹಡ್ತಾಳ್ ನವೀನ್ ಇದ್ದರು.