ಬಣಕಲ್ ಕರ್ನಾಟಕ ಬ್ಯಾಂಕ್ ನಲ್ಲಿ 18ವರ್ಷಗಳ ಕಾಲ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಧರ್ ಅವರು ಕೊಪ್ಪ ಬ್ಯಾಂಕ್ ಗೆ ವರ್ಗಾವಣೆ ಗೊಂಡಿದ್ದಾರೆ.
ಬಣಕಲ್ ಕರ್ನಾಟಕ ಬ್ಯಾಂಕ್ ಎಂದರೆ ಮೊದಲಿಗೆ ನೆನಪಾಗುವುದೇ ಶ್ರೀಧರ್. ಅವರ ಸೌಮ್ಯ ವ್ಯಕ್ತಿತ್ವದಿಂದಲೇ ಬಣಕಲ್ ಜನತೆಗೆ ತುಂಬಾ ಆತ್ಮೀಯರಾಗಿದ್ದರು.
ಕೆಲಸದಲ್ಲಿ ಎಷ್ಟೇ ಒತ್ತಡ ವಿದ್ದರೂ ಕೂಡ ಗ್ರಾಹಕರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಬ್ಯಾಂಕ್ ಗೆ ಬರುತ್ತಿದ್ದ ಗ್ರಾಹಕರು ಶ್ರೀಮಂತರೆ ಆಗಲಿ ಬಡವರೇ ಆಗಲಿ ಅವರು ನಗುಮೊಗದಿಂದಲೇ ಗ್ರಾಹಕರೊಂದಿಗೆ ಬೆರೆಯುತ್ತಿದ್ದರು. ಹಾಗೆ ಅವರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸುತ್ತಿದ್ದರು.ಬಣಕಲ್ ಕರ್ನಾಟಕ ಬ್ಯಾಂಕ್ ಗೆ ಹೋದರೆ ಜನರಿಗೆ ಮೊದಲಿಗೆ ನೆನಪಾಗುವ ಹೆಸರೇ ಶ್ರೀಧರ್.
ಅವರು ಇದ್ದರೆ ಆನೆ ಬಲ ವಿದ್ದಂತೆ ಜನ ಹೇಳುತ್ತಿದ್ದರು.
ತಮಗೆ ಗೊತ್ತಿರುವಂತೆ ಯಾವುದೇ ಬ್ಯಾಂಕ್ ಗೆ ಹೋದಾಗ ಸೌಜನ್ಯ ದಿಂದ ಮಾತಾಡೋ ಒಬ್ಬನೇ ಒಬ್ಬ ಸಿಬ್ಬಂದಿ ಸಿಗುವುದು ಬಹಳ ವಿರಳ ಅದು ಎಲ್ಲರಿಗೂ ತಿಳಿದಿರುವ ಸತ್ಯವೇ. ಆದರೆ ಶ್ರೀಧರ್ ಎಲ್ಲದಿಕ್ಕೂ ತದ್ವಿರುದ್ದ ಅವರ ಉತ್ತಮ ನಡವಳಿಕೆಯಿಂದಲೇ ಬಣಕಲ್ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು..ಅವರ ವರ್ಗಾವಣೆಗೊಂಡಿರುದು ಬಹಳಷ್ಟು ಜನರಿಗೆ ಬೇಸರ ಮೂಡಿಸಿದೆ. ಶ್ರೀಧರ್ ಅವರು ಬ್ಯಾಂಕ್ ನಲ್ಲಿ ಇದ್ದರೆ ಮಾತ್ರ ಬಹಳಷ್ಟು ಜನರು ಬ್ಯಾಂಕ್ ಗೆ ಹೋಗುತ್ತಿದ್ದರು. ಜನರು ಶ್ರೀಧರ್ ಅವರನ್ನು ಅಷ್ಟು ಅವಲಂಬಿಸಿದ್ದರು.ಈಗ ಶ್ರೀಧರ್ ವರ್ಗಾವಣೆಗೊಂಡಿರುವುದು ಬೇಸರ ತರಿಸಿದೆ.
ವರದಿ ✍️ಸೂರಿ ಬಣಕಲ್