ಸದ್ಗುರುಗಳು ಪ್ರಾರಂಭಿಸಿದ ಸಾಮಾಜಿಕ ಕಾರ್ಯಕ್ರಮವಾದ 16th ಇಶಾ ಗ್ರಾಮೋತ್ಸವ 2024ರ ಬಹು ನಿರೀಕ್ಷಿತ ಅಂತಿಮ ಪಂದ್ಯವನ್ನು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ 112ಅಡಿಗಳ ಆದಿ ಯೋಗಿ ಪ್ರತಿಮೆಯ ಮುಂದೆ ಆಡಲಾಯಿತು ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸಾವಿರಾರು ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆಯನ್ನು ನೀಡಿದೆ. ಇಂದು ಇದೆ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ 29/12/2024 ರ ವಾಲಿಬಾಲ್ ಪಂದ್ಯ ನಡೆಯಿತು.
ತಮಿಳು ನಾಡಿನ ಕೊಯಮತ್ತೂರು ನಲ್ಲಿ ನಡೆದ ವಾಲಿಬಾಲ್ ಪಂದ್ಯ ಕೂಟದಲ್ಲಿ ಆದಿಲ್ ನಾಯಕತ್ವದ ಬಣಕಲ್ ಆಲಿಫ್ ಸ್ಟಾರ್ ತಂಡವು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸತತವಾಗಿ ಎಲ್ಲಾ ತಂಡಗಳ ವಿರುದ್ಧ ಗೆಲುವು ಪಡೆಯುವ ಮೂಲಕ ಕಪ್ಪನ್ನು ಕೈಗೆತ್ತಿಕೊಂಡಿದ್ದಾರೆ.
ಆದಿಲ್ ನಾಯಕತ್ವದ ತಂಡದ ಸಾಧನೆಗೆ ಬಣಕಲ್ ಗ್ರಾಮಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ತಂಡದ ಆಟಗಾರರು ಆದಿಲ್ (ನಾಯಕ )ಕಿಶೋರ್ (ಉಪನಾಯಕ ), ಸುಹೇಲ್, ಕಿರಣ್, ಆಕಾಶ್, ರಶೀದ್, ರಿಫಾದ್
ವರದಿ :✍️ಸೂರಿ ಬಣಕಲ್