ಚಿಕ್ಕಮಗಳೂರು ಜಿಲ್ಲೆ.ಮೂಡಿಗೆರೆ ತಾಲ್ಲೂಕು. ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಪೋಷಕರ ದಿನಾಚರಣೆಯನ್ನು ದಿನಾಂಕ 30 : 11 : 2024ರ ಶನಿವಾರದಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಬ್ಯಾಂಕ್ ಬಣಕಲ್ ಶಾಖೆಯ ವ್ಯವಸ್ಥಾಪಕರಾದ ಮಂಜುನಾಥ್ ಮಾತನಾಡಿ ಪ್ರತಿಯೊಬ್ಬರು ಜೀವನ ಜಂಜಾಟದಿಂದ ಹೊರಬಂದು ಮಕ್ಕಳೊಂದಿಗೆ ಮಕ್ಕಳಾಗಿ ಸಂಭ್ರಮಿಸಲು ವಿದ್ಯಾಭಾರತಿ ವಿದ್ಯಾಸಂಸ್ಥೆ ಬಹುದೊಡ್ಡ ವೇದಿಕೆಯನ್ನು ಕಲ್ಪಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಬಣಕಲ್ ಶ್ರೀ ಸಾಯಿ ಕೃಷ್ಣ ಆಸ್ಪತ್ರೆಯ ನಿರ್ದೇಶಕರಾದ ನವೀನ್ ತಳವಾರ ಮಾತನಾಡಿ ಪ್ರತಿಯೊಂದು ಶಾಲೆಯು ಶಿಕ್ಷಣ ನೀಡುವ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ಪೋಷಕರು ಮತ್ತು ಶಾಲೆಯ ಬಾಂಧವ್ಯ ಗಟ್ಟಿಗೊಳ್ಳುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಂ ಶೆಟ್ಟಿ ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ 38ನೇ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಪೋಷಕರಿಗೆ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಇದರಲ್ಲಿ ಎಲ್ಲಾ ಪೋಷಕರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಮಕ್ಕಳ ಶಿಕ್ಷಣದಲ್ಲಿ ಪೋಷಕರ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯಗೌಡ.ಕೋಶಾಧ್ಯಕ್ಷರಾದ ಯು.ಪಿ.ರಾಮಚಂದ್ರ ಹೊಳ್ಳ.ಕಾರ್ಯದರ್ಶಿಗಳಾ ಬಿ.ಪಿ.ಲಿಂಗಪ್ಪ.ನಿರ್ದೇಶಕರಾದ ಬಿ.ಬಿ.ಮಂಜುನಾಥ್. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗರಾಜ್.ಪೋಷಕರಾದ ದೇವಣ್ಣ ಮತ್ತು ಮಮತಾ.ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪಠ್ಯೇತರ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರದಲ್ಲಿ ಪೋಷಕರಿಗಾಗಿ ವೈಯಕ್ತಿಕ, ಸಾಮೂಹಿಕ ಹಾಗೂ ದಂಪತಿಗಳಿಗೆ ವಿಶೇಷವಾದ ವಿವಿಧ ಮನೋರಂಜನೀಯ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಇದರಲ್ಲಿ ವಿಜೇತರಾದ ಪೋಷಕರಿಗೆ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು. ಮತ್ತು ಮಕ್ಕಳಲ್ಲಿ ವ್ಯಾವಹಾರಿಕ ಮತ್ತು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸುವ ಸಲುವಾಗಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳವನ್ನು ಆಯೋಜಿಸಲಾಗಿತ್ತು.ಇದರಲ್ಲಿ ಮಕ್ಕಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು ಹಾಗೂ ವಿವಿಧ ವಸ್ತುಗಳ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇಡೀ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ಪ್ರತೀ ಆಟದ ನಂತರ ಅದೃಷ್ಟ ಬಹುಮಾನಯೋಜನೆಯಿತ್ತು .
ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯ ಶಿಕ್ಷಕರಾದ ವಸಂತ್ ಸಹ ಶಿಕ್ಷಕರುಗಳಾದಲೀಲಾಮಣಿ,ಭಕ್ತೇಶ್ ಶೆಖರಪ್ಪ,ಗೀತಾ.ಕಮಲಮ್ಮ.ಲಿಂಗರಾಜ್.ಶ್ವೇತಾ.ಪದ್ಮಶ್ರೀ.ವಿಜಯೇಂದ್ರ.ಪ್ರತಾಪ್.ಲೋಕೇಶ್.ಪೂಜಾ.ಅಶ್ವಿತ.ಆಶಾ.ಅನುಷ.ಅನುಪ.ಆರೋಗ್ಯವಾಣಿ.ಶಾಲಾ ಅಡುಗೆ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.