ತರುವೆ ಏಕಲವ್ಯ ಮಾದರಿ ವಸತಿ ಶಾಲೆ: ಮಕ್ಕಳಿಗೆ ಭಯ ತೊಲಗಿಸಲು “ತೆರೆದ ಮನೆ”ಕಾರ್ಯಕ್ರಮ ಪಿ.ಎಸ್. ಐ ರೇಣುಕಾ

ಬಣಕಲ್ :ಕೊಟ್ಟಿಗೆಹಾರದ ತರುವೆ ಏಕಲವ್ಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದ ಮನೆ ಎಂಬ ವಿನೂತ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಣಕಲ್ ಠಾಣೆಯ ಪಿಎಸ್ಸೈ ರೇಣುಕಾ ರವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಹಿತ ದೃಷ್ಥಿಯಿಂದ ಸೇವೆ ಮಾಡುತ್ತಿದ್ದು ಸದಾ ಅವರ ರಕ್ಷಣೆಯಲ್ಲಿ ತೊಡಗಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾತ್ರಿ ಹಗಲು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಸಮಾಜದ ಹಿತ ದೃಷ್ಟಿಯಿಂದ ಅಧಿಕಾರಿಗಳು ಜನಸ್ನೇಹಿಯಾಗಿ ಇರುತ್ತಿದ್ದು ಇದರಿಂದ ಜನರ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಗಳು ಮಹಿಳೆ ಮತ್ತು ವಿಧ್ಯಾರ್ಥಿಗಳ ಮೇಲೆ ನಡೆಯುತ್ತಿದ್ದು ಅವರ ರಕ್ಷಣೆಗಾಗಿ ಅನೇಕ ಕಾನೂನು ರೂಪಿಸಿದ್ದು ಹೆಣ್ಣು ಮಕ್ಕಳ ರಕ್ಷಣೆಗೆಂದು ವಿಶೇಷವಾಗಿ ಪೋಕ್ಸೋ ಕಾಯಿದೆ ತಂದಿದ್ದು ಇದು ಅವರಿಗೆ ವರದಾನವಾಗಿದೆ. ಇದಕ್ಕೆ ನಮ್ಮ ಅಧಿಕಾರಿಗಳು ಸದಾ ನಿಮ್ಮ ರಕ್ಷಣೆಗೆ ಬದ್ದರಾಗಿದ್ದವೆ. ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆ ಎಂದರೆ ಭಯ ಬೇಡ ನಿರ್ಭಯವಾಗಿ ನೀವು ದೂರು ನೀಡಿ, ನಿಮ್ಮ ರಕ್ಷಣೆ ನಾವು ರಾತ್ರಿ ಹಗಲು ಸೇವೆಯಲ್ಲಿ ಇರುತ್ತವೆ ಎಂದರು.

ಹೆಣ್ಣು ಮಕ್ಕಳು ಶಾಲೆಗೆ ಬರುವ ವೇಳೆಯಲ್ಲಿ ಕಿಡಿಗೇಡಿಗಳಿಂದ ತೊಂದರೆಗೆ ಒಳಗಾದಗ ಭಯ ಪಡೆದೆ ಇಲಾಖೆ ಯಿಂದ ಉಚಿತ ಸಹಾಯವಾಣಿ 112 ನಂಬರ್ ಕರೆ ಮಾಡಿ ತಕ್ಷಣ ನಾವು ನಿಮ್ಮ ಸಹಾಯಕ್ಕೆ ಬರುತ್ತೆವೆ ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಅಭಿಷೇಕ್ ಸತೀಶ್ ನಾಗಪ್ಪತುಕ್ಕಣ್ಣವರ ಹಾಜರಿದ್ದರು.

ವರದಿ ✍️ಸೂರಿ ಬಣಕಲ್