ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಪುರುಷರ ವಿಭಾಗದ ಟ್ರಿಪಲ್ ಜಂಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮತ್ತಿಕಟ್ಟೆ ಗ್ರಾಮದ ಯುವಕ ಶ್ರೇಯಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಮ್ಮೆ ರಾಜ್ಯ ಮಟ್ಟದಲ್ಲಿಆಡಿದ ಅನುಭವ ಹೊಂದಿರುವ ಶ್ರೇಯಸ್ ಜಿಲ್ಲೆಯಲ್ಲಿ ಗೆದ್ದು ಮತ್ತೊಮ್ಮೆ ರಾಜ್ಯಕ್ಕೆ ಆಯ್ಕೆಯಾಗುವಂತೆ ಆಗಲಿ ಎಂದು ಮತ್ತಿಕಟ್ಟೆ ಗ್ರಾಮಸ್ಥರು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್