ಬಣಕಲ್ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಸದ ಮೂಟೆ ವಿಚಾರವಾಗಿ ಸ್ಪಷ್ಟನೆ

ಗ್ರಾಮ ಪಂಚಾಯಿತಿ ಮುಂದೆ ಕಸ ಹಾಕಿರುವ ಬಗ್ಗೆ ವರದಿಗಳು ಪ್ರಸಾರವಾದ ಹಿನ್ನಲೆ ಇಂದು ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕಾ ಭಾನು ಅವರ ಅದ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಗೆ ಕಸ ಹಾಕಿದ ವ್ಯಕ್ತಿ ಮಣಿಕಂಠ ಹಾಗೂ ಕಸದ ಗಾಡಿಯ ಆರಿಫ್ ಅವರನ್ನು ಕರೆಸಿ ಆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.ಬೆಳಗ್ಗೆ 11ಗಂಟೆಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೆ ನಮ್ಮ ಊರು ಬಣಕಲ್ ವಾಟ್ಸಪ್ ಗ್ರೂಪಿನ ಅಡ್ಮಿನ್ ಗಳ ಸಮ್ಮುಖದಲ್ಲಿ ಘಟನೆ ಬಗ್ಗೆ ವಿವರಣೆ ನೀಡಿದರು.

ಕಸ ಹಾಕಿರುವ ಬಗ್ಗೆ ಸಭೆಯಲ್ಲಿ ಮಾತನಾಡಿದ ಅವರು ನಾನು ಗ್ರಾಮ ಪಂಚಾಯಿತಿ ಮುಂದೆ ಕಸ ಹಾಕಬೇಕು ಎನ್ನುವ ಉದ್ದೇಶದಿಂದ ಇಟ್ಟಿರುವುದಲ್ಲ ವಾಹನ ಬಾರದೆ ಇದ್ದಾಗ ಕಸವನ್ನು ಗ್ರಾಮ ಪಂಚಾಯಿತಿ ಮುಂದೆ ನಿಲ್ಲಿಸಿದ ವಾಹನಕ್ಕೆ ಸುರಿಯುತ್ತಿದ್ದೆ ಆದರೆ ನಿನ್ನೆದಿವಸ ಗ್ರಾಮ ಪಂಚಾಯಿತಿ ಬಳಿ ಬಂದಾಗ ವಾಹನ ಇರಲಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯಿತಿ ಗೆಟ್ ಬಳಿ ಇಟ್ಟು ಹೋಗಿದ್ದೆ ಆರಿಫ್ ಅವರು ಗಾಡಿ ಬಂದಾಗ ಅದನ್ನು ಗಮನಿಸಿ ಗಾಡಿಗೆ ಹಾಕುತ್ತಾರೆ ಎಂಬ ಉದ್ದೇಶದಿಂದ ಅಷ್ಟೆ, ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದರು. ಇದರಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಇಲ್ಲ ಗಾಡಿ ಬಾರದೆ ಇದ್ದಾಗ ನಾನು ಗ್ರಾಮ ಪಂಚಾಯಿತಿ ಗಮನಕ್ಕೆ ತರಬೇಕಾಗಿತ್ತು ಅದು ನನ್ನಿಂದ ತಪ್ಪಾಗಿದೆ ಅವರ ಗಮನಕ್ಕೆ ತರದೇ ಕಸವನ್ನು ಬಿಟ್ಟು ಹೋಗಿರುವುದಕ್ಕೆ ಕ್ಷಮೆ ಇರಲಿ ಎಂದರು. ನಾನು ಮೂಟೆ ಕಟ್ಟಿ ಇಟ್ಟಿದ್ದೆ ನನ್ನ ದುರದೃಷ್ಟಕ್ಕೆ ಗಾಡಿ ಕೆಟ್ಟು ಗ್ಯಾರೇಜ್ ನಲ್ಲಿ ನಿಂತಿತ್ತು ಅದರಿಂದ ಕಸ ಅಲ್ಲೇ ಉಳಿದಿತ್ತು ಇದರ ಕೆಲವರು ತಪ್ಪು ಪ್ರಚಾರ ಮಾಡಿದ್ದಾರೆ. ನನ್ನಿಂದ ಆದ ಪ್ರಮಾದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ ಎಂದರು ಇದರಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆರಿಫ್ ಅವರು ಮಾತನಾಡಿ ನನ್ನಿಂದಲೂ ತಪ್ಪಾಗಿದೆ ನಾನು ಘಟನೆ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ಕೊಡಬೇಕಾಗಿತ್ತು ನಮ್ಮಿಬ್ಬರಿಂದ ಆದ ಕೆಲವು ವ್ಯತ್ಯಾಸಗಳಿಂದ ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ಬರುವಂತಾಯಿತು ಇದಕ್ಕೆ ಕ್ಷಮೆ ಇರಲಿ ಎಂದರು.ಸಭೆಯಲ್ಲಿ ಗ್ರಾಮ ಪಂಚಾಯಿತಿ p d o ಕೃಷ್ಣಪ್ಪ ಸದಸ್ಯರಾದ ಇರ್ಫಾನ್, ಮಧುಕುಮಾರ್, ನಮ್ಮವರು ಬಣಕಲ್ ವಾಟ್ಸಪ್ ಗ್ರೂಪ್ ನ ಅಡ್ಮಿನ್ ಗಳು ಹಾಜರಿದ್ದರು.

ವರದಿ ✍️ಸೂರಿ ಬಣಕಲ್