ಬಣಕಲ್ ಗ್ರಾಮದ ಗುಡ್ಡೆಟ್ಟಿ ಸಂಪರ್ಕಿಸುವ ಕುವೆಂಪುನಗರದ ರಸ್ತೆ ವರ್ಷಕಳೆದರೂ ದುರಸ್ಥಿ ಕಾಣದೆ ಜನರ ಆಕ್ರೋಶಕ್ಕೆ ಕಾರಣವಾಗಿದೆ

Arun Poojary

ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಗ್ರಾಮದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅವುಗಳನ್ನು ದುರಸ್ಥಿಗೊಳಿಸದ ಪರಿಣಾಮ ಪ್ರಯಾಣಿಕರ ಗೋಳು ಕೇಳೋರ್ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಬಣಕಲ್ ಗ್ರಾಮದ ಕುವೆಂಪುನಗರದಿಂದ ಗುಡ್ಡೆಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ ವಾಗಿ ಹದಗೆಟ್ಟಿದೆ ಮಳೆಯಿಂದ ತೀವ್ರ ಗುಂಡಿ ಬಿದ್ದಿದ್ದು ವಾಹನ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ ಮಳೆಯಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ಗುಂಡಿಯ ಆಳ ತಿಳಿಯದೆ ವಾಹನಗಳು ಬೀಳುತ್ತೀವೆ.

ಈ ರಸ್ತೆಯಲ್ಲಿ ಬರುವ ಹೊಸಬರಿಗೆ ದಿಡೀರಾಗಿ ಎದುರಾಗುವ ಗುಂಡಿಗಳಿಂದ ಅದನ್ನು ತಪ್ಪಿಸಲಾಗದೆ ವಾಹನಗಳು ಗುಂಡಿಗೆ ಬಿದ್ದು ಹಾನಿಯಾಗುತ್ತಿದೆ ದ್ವಿಚಕ್ರ ವಾಹನಗಳಿಗಂತೂ ಗುಂಡಿಗಳು ಯಮಗುಂಡಿಗಳಾಗಿವೆ ಹಲವಾರು ಭಾರಿ ದ್ವಿಚಕ್ರ ವಾಹನ ಸವರಾರು ರಾತ್ರಿ ಸಮಯದಲ್ಲಿ ಗುಂಡಿ ಬಿದ್ದ ರಸ್ತೆತಪ್ಪಿಸಲು ಹೋಗಿ ಆಸ್ಪತ್ರೆ ಸೇರಿದ ಉದಾಹರಣೆ ಬೇಕಾದಷ್ಟಿದೆ ಜನ ಪ್ರತಿನಿದಿಗಳು ಚುನಾವಣೆ ಬಂದಾಗ ಸ್ವಲ್ಪ ಗುಂಡಿ ಮುಚ್ಚುವ ಪ್ರಯತ್ನ ಮಾಡುತ್ತಾರೆ ನಂತರ 5ವರ್ಷ ಮುಖ ಹಾಕಿಯೂ ನೋಡುವುದಿಲ್ಲ ಈ ರಸ್ತೆ ಬಾಳುರು ಗುಡ್ಡೆಟ್ಟಿ ಕೆಲ್ಲಹಳ್ಳಿ ಹೊರಟ್ಟಿ ದೊಡ್ಡನಂದಿ ಹೀಗೆ ಹಲವು ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆ ಆಗಿದೆ ದಿನಕ್ಕೆ ನೂರಾರು ವಾಹನಗಳು ಸಂಚರಿಸುತ್ತವೆ ಯಾವುದೇ ಆಟೋ ರಿಕ್ಷಾಗಳು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತವೆ ಅನಾರೋಗ್ಯ ಪೀಡಿತರು ಆಸ್ಪತ್ರೆ ಹೋಗಲು ಯಾವುದೇ ವಾಹನಗಳಿಗೆ ಕರೆ ಮಾಡಿದರು ಯಾವುದೇ ವಾಹನಗಳು ತಕ್ಷಣಕ್ಕೆ ಬರಲು ಕೇಳುವುದಿಲ್ಲ ಕಾರಣ ಒಮ್ಮೆ ಈ ರಸ್ತೆಯಲ್ಲಿ ಬಾಡಿಗೆ ಬಂದರೆ ಮಾರನೇ ದಿನ ಗ್ಯಾರೇಜ್ ನಲ್ಲಿ ವಾಹನ ನಿಲ್ಲಿಸಬೇಕಾದ ಪರಿಸ್ಥಿತಿ ಇದರಿಂದ ಈ ಭಾಗದ ಜನರು ಬಹಳ ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದೋದಗಿದೆ ರೋಗಿಗಳು ಬಾಣಂತಿಯರು ಬಹಳ ಪ್ರಯಾಸದಿಂದ ಈ ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಕುವೆಂಪು ನಗರ ಗುಡ್ಡೆಟ್ಟಿ ಭಾಗದ ಸಾರ್ವಜನಿಕರು ಜನಪ್ರತಿನಿದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗುಡ್ಡೆಟ್ಟಿಯ ಅರುಣ್ ಪೂಜಾರಿ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಗುಡ್ಡೆಟ್ಟಿ ಕುವೆಂಪುನಗರ ವಾಸಿಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ನಿತ್ಯ ನರಕದ ಅನುಭವವಾಗುತ್ತದೆ ಜನಪ್ರತಿನಿದಿಗಳನ್ನು ಕೇಳಿದರೆ 50ಲಕ್ಷ ಹಣ ಬಿಡುಗಡೆ ಆಗಿದೆ ಸದ್ಯದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬ ಉತ್ತರ ಸಿಗುತ್ತದೆ ಆದರೆ ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಕನಸಾಗೇ ಉಳಿದಿದೆ.

ಕಳೆದ ಬಾರಿ ಕುವೆಂಪುನಗರ ಹಾಗೂ ಗುಡ್ಡಹಟ್ಟಿಯ ಜನರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದರು ಕೊನೆಗೆ ಜನರ ಒತ್ತಡಕ್ಕೆ ಮಣಿದು ಗುಂಡಿಗಳನ್ನು ಮುಚ್ಚಲಾಗಿತ್ತು ಆದರೆ ಕೆಲವೇ ವಾರಗಳಲ್ಲಿ ಪುನಃ ಮೊದಲಿನ ಸ್ಥಿತಿಗೆ ಬಂದಿತ್ತು ನಂತರದ ದಿನಗಳಲ್ಲಿ ಯಾವುದೇ ಕಾಮಗಾರಿ ನಡೆಯದೆ ಕುವೆಂಪುನಗರದ ರಸ್ತೆಯ ಸ್ಥಿತಿ ಶೋಚನಿಯವಾಗಿದೆ ಮಳೆಗಾಲ ದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ನಾಟಿ ಗದ್ದೆಯಂತೆ ಗೋಚರಿಸುತ್ತದೆ ಆ ರೀತಿಯಲ್ಲಿ ಈ ರಸ್ತೇ ಹದಗೆಟ್ಟಿದೆ.ಹಲವಾರು ಸಣ್ಣ ಪುಟ್ಟ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ ಮುಂದೆ ದೊಡ್ಡ ಅನಾಹುತವಾಗುವ ಮುಂಚೆ ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಈ ಭಾಗದ ಜನರು ತಾಳ್ಮೆಯಿಂದ ಇದ್ದಾರೆ ದಯವಿಟ್ಟು ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಈ ರೀತಿಯ ತಾತ್ಸಾರ ಮನೋಭಾವನೆಗೆ ಜನಪ್ರತಿನಿದಿನಗಳು ತಕ್ಕ ಬೆಲೆ ತೆರಬೇಕಾಗದ ದಿನ ದೂರವಿಲ್ಲಎಂದರು