ಕೃಷಿ ಪತ್ತಿನ ಸಹಕಾರ ಸಂಘ ದ ಉಪಾಧ್ಯಕ್ಷರಾಗಿ ಕೆ ಪಿ ರಮೇಶ್ ಆಯ್ಕೆ

ಬಣಕಲ್: ಬೆಳಕು ಕಟ್ಟಡದ ಕೃಷಿ ಪತ್ತಿನ ಸಹಕಾರ ಸಂಘ (ನಿ) ದ ಉಪಾಧ್ಯಕ್ಷರಾಗಿ ಕೆ ಪಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಉಪಾಧ್ಯಕ್ಷರಾಗಿದ್ದ ಬಣಕಲ್ ಗ್ರಾಮದ ರಂಗನಾಥ್ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕೆ ಪಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಿ ಎಂ ಭರತ್, ನಿರ್ದೇಶಕರುಗಳಾದ ರಂಗನಾಥ್, ಗಜೇಂದ್ರ , ಕಲ್ಲೇಶ್, ಅಭಿಲಾಷ್, ನಾರಾಯಣ ಗೌಡ್ರು, ಬಿ ಎಸ್ ವಿಕ್ರಂ, ಶ್ಯಾಮಣ್ಣ, ಪ್ರದೀಪ್, ಚಂದ್ರಶೇಖರ್, ದಿಲ್ದಾರ್ ಬೇಗಂ, ಲಕ್ಷ್ಮಿ, ಮಮತಾ DCC ಬ್ಯಾಂಕ್ ನಾ ಮೇಲ್ವಿಚಾರಕಾರದ ಗುರುಮೂರ್ತಿ, ಹಾಗೂ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ನಿಶಾಂತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು